ಹತ್ತು ವರ್ಷಗಳಿಂದ ದೂರುದಾರರ ಬಳಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ನಾಗರಾಜ, ಮಾಲೀಕರ ಕುಟುಂಬ ಸದಸ್ಯರ ವಿಶ್ವಾಸ ಗಿಟ್ಟಿಸಿಕೊಂಡಿದ್ದ. ಮಾಲೀಕರು ಹಣದ ಅವಶ್ಯಕತೆ ಇದ್ದಾಗ ಆತನಿಗೇ ಎಟಿಎಂ ಕಾರ್ಡ್ ಕೊಟ್ಟು ಡ್ರಾ ಮಾಡಿಕೊಂಡು ಬರಲು ಕಳಹಿಸುತ್ತಿದ್ದರು. ಈ ನಡುವೆ ಆತನಿಗೆ ಸಚಿನ್ ಎಂಬಾತನ ಪರಿಚಯವಾಗಿದ್ದು, ಇಬ್ಬರೂ ಸೇರಿ ದೂರುದಾರರ ಖಾತೆಯಿಂದ ಹಣ ಎಗರಿಸಲು ಸಂಚು ರೂಪಿಸಿದ್ದರು.