<p><strong>ಬೆಂಗಳೂರು</strong>: ಕೋವಿಡ್ ಕಾಲದಲ್ಲಿ ವಲಸೆ ಕಾರ್ಮಿಕನೊಬ್ಬ ಸೈಕಲ್ನಲ್ಲಿ ಸತತ ಏಳು ದಿನ 1,700 ಕಿಲೋಮೀಟರ್ ಸಂಚರಿಸಿದ ಕಥೆಯನ್ನು ಇಟ್ಟುಕೊಂಡು ನಿರ್ಮಿಸಿರುವ ‘ಸೈಕಲ್ ಮಹೇಶ್’ ಚಿತ್ರವು ಹಲವು ಕಥೆಗಳನ್ನು ಹೇಳುತ್ತದೆ ಎಂದು ಸಾಕ್ಷ್ಯಚಿತ್ರ ನಿರ್ದೇಶಕ ಸುಹೇಲ್ ಬ್ಯಾನರ್ಜಿ ತಿಳಿಸಿದರು.</p>.<p>ಗೌರಿ ಲಂಕೇಶ್ ಅವರ ಜನ್ಮ ದಿನ ‘ಗೌರಿ ದಿನ’ ಕಾರ್ಯಕ್ರಮದ ಪ್ರಯುಕ್ತ ಗೌರಿ ಸ್ಮಾರಕ ಟ್ರಸ್ಟ್ ಬುಧವಾರ ನಗರದಲ್ಲಿ ಹಮ್ಮಿಕೊಂಡಿದ್ದ ‘ಸೈಕಲ್ ಮಹೇಶ್’ ಸಾಕ್ಷ್ಯಚಿತ್ರ ಪ್ರದರ್ಶನದ ಬಳಿಕ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ದೇಶದಾದ್ಯಂತ ಲಾಕ್ಡೌನ್ ಮಾಡಿದಾಗ ವಲಸೆ ಕಾರ್ಮಿಕರು ಕೆಲಸ ಇಲ್ಲದೇ, ಊರಿಗೂ ಮರಳಲಾರದೇ ಸಂಕಷ್ಟಕ್ಕೆ ಸಿಲುಕಿದ್ದರು. ಹಲವರು ನಡೆದುಕೊಂಡೇ ಹೊರಟಿದ್ದರು. ಮಹೇಶ್ ಎಂಬ ಯುವ ಕಾರ್ಮಿಕನೊಬ್ಬ ಸೈಕಲ್ನಲ್ಲಿ ತನ್ನೂರಿಗೆ ಹೊರಟು ಏಳು ದಿನಗಳಲ್ಲಿ ತಲುಪಿದ. ಅದು ಮಾಧ್ಯಮಗಳಲ್ಲಿ ಆಗ ದೊಡ್ಡ ಸುದ್ದಿಯಾಗಿತ್ತು. ಈ ನಿಜ ಘಟನೆಯನ್ನು ಇಟ್ಟುಕೊಂಡು ಕಥೆ ಹೆಣೆಯಲಾಗಿದೆ. ನಾವು ಇಲ್ಲಿ ಆಡಳಿತದ ವೈಫಲ್ಯವನ್ನು ತೋರಿಸದೇ ಇದ್ದರೂ ಕಥೆಯೇ ಅದನ್ನು ಹೇಳುತ್ತದೆ’ ಎಂದು ಹೇಳಿದರು.</p>.<p>ಭಾರತೀಯ ಸಿನಿಮಾ ಮಾಧ್ಯಮವು ಕಾರ್ಮಿಕ ವರ್ಗವನ್ನು ಅಲಕ್ಷಿಸಿದೆ. ಸಣ್ಣ ಚಿತ್ರಗಳ ಮೂಲಕ ಕಾರ್ಮಿಕರ ಸಂಕಷ್ಟ, ಹೋರಾಟವನ್ನು ತೋರಿಸುವ ಪ್ರಯತ್ನ ಇದು ಎಂದರು.</p>.<p>ಅಂತರರಾಷ್ಟ್ರೀಯ ಡಾಕ್ಯುಮೆಂಟರಿ ಚಲನಚಿತ್ರೋತ್ಸವದಲ್ಲಿ ಪ್ರಥಮ ಸ್ಥಾನ ಪಡೆದ ಈ ಚಿತ್ರವು 60 ನಿಮಿಷದ್ದಾಗಿದೆ. ಒಡಿಶಾ, ಮರಾಠಿ ಮತ್ತು ಹಿಂದಿ ಮಿಶ್ರಿತ ಭಾಷೆಯಲ್ಲಿರುವ ಚಿತ್ರವು ಮಹೇಶನ ಪ್ರಯಾಣದ ವೇಳೆ ದಾರಿ ತಪ್ಪುವುದು, ಸೈಕಲ್ ಹಾಳಾಗುವುದು, ಗುಡ್ಡ ಏರುವುದು, ರಾತ್ರಿ ಪ್ರಯಾಣ, ಸ್ನೇಹಿತರೊಂದಿಗೆ ಚರ್ಚೆಗಳನ್ನು ಕಟ್ಟಿಕೊಡುತ್ತದೆ.</p>.<p>ಸಂವಾದ ಕಾರ್ಯಕ್ರಮದಲ್ಲಿ ಚಳವಳಿಗಾರ ವಿ.ಎಸ್. ಶ್ರೀಧರ್, ಗೌರಿ ಸ್ಮಾರಕ ಟ್ರಸ್ಟ್ ಅಧ್ಯಕ್ಷೆ ತೀಸ್ತಾ ಸೆಟಲ್ವಾಡ್, ಉಪಾಧ್ಯಕ್ಷೆ ಕವಿತಾ ಲಂಕೇಶ್, ಕಾರ್ಯದರ್ಶಿ ಪ್ರದೀಪ್, ಸಂಭಾಷಣೆಗಾರ್ತಿ ಗುರ್ಲನ್ ಜಡ್ಜ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಕೋವಿಡ್ ಕಾಲದಲ್ಲಿ ವಲಸೆ ಕಾರ್ಮಿಕನೊಬ್ಬ ಸೈಕಲ್ನಲ್ಲಿ ಸತತ ಏಳು ದಿನ 1,700 ಕಿಲೋಮೀಟರ್ ಸಂಚರಿಸಿದ ಕಥೆಯನ್ನು ಇಟ್ಟುಕೊಂಡು ನಿರ್ಮಿಸಿರುವ ‘ಸೈಕಲ್ ಮಹೇಶ್’ ಚಿತ್ರವು ಹಲವು ಕಥೆಗಳನ್ನು ಹೇಳುತ್ತದೆ ಎಂದು ಸಾಕ್ಷ್ಯಚಿತ್ರ ನಿರ್ದೇಶಕ ಸುಹೇಲ್ ಬ್ಯಾನರ್ಜಿ ತಿಳಿಸಿದರು.</p>.<p>ಗೌರಿ ಲಂಕೇಶ್ ಅವರ ಜನ್ಮ ದಿನ ‘ಗೌರಿ ದಿನ’ ಕಾರ್ಯಕ್ರಮದ ಪ್ರಯುಕ್ತ ಗೌರಿ ಸ್ಮಾರಕ ಟ್ರಸ್ಟ್ ಬುಧವಾರ ನಗರದಲ್ಲಿ ಹಮ್ಮಿಕೊಂಡಿದ್ದ ‘ಸೈಕಲ್ ಮಹೇಶ್’ ಸಾಕ್ಷ್ಯಚಿತ್ರ ಪ್ರದರ್ಶನದ ಬಳಿಕ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ದೇಶದಾದ್ಯಂತ ಲಾಕ್ಡೌನ್ ಮಾಡಿದಾಗ ವಲಸೆ ಕಾರ್ಮಿಕರು ಕೆಲಸ ಇಲ್ಲದೇ, ಊರಿಗೂ ಮರಳಲಾರದೇ ಸಂಕಷ್ಟಕ್ಕೆ ಸಿಲುಕಿದ್ದರು. ಹಲವರು ನಡೆದುಕೊಂಡೇ ಹೊರಟಿದ್ದರು. ಮಹೇಶ್ ಎಂಬ ಯುವ ಕಾರ್ಮಿಕನೊಬ್ಬ ಸೈಕಲ್ನಲ್ಲಿ ತನ್ನೂರಿಗೆ ಹೊರಟು ಏಳು ದಿನಗಳಲ್ಲಿ ತಲುಪಿದ. ಅದು ಮಾಧ್ಯಮಗಳಲ್ಲಿ ಆಗ ದೊಡ್ಡ ಸುದ್ದಿಯಾಗಿತ್ತು. ಈ ನಿಜ ಘಟನೆಯನ್ನು ಇಟ್ಟುಕೊಂಡು ಕಥೆ ಹೆಣೆಯಲಾಗಿದೆ. ನಾವು ಇಲ್ಲಿ ಆಡಳಿತದ ವೈಫಲ್ಯವನ್ನು ತೋರಿಸದೇ ಇದ್ದರೂ ಕಥೆಯೇ ಅದನ್ನು ಹೇಳುತ್ತದೆ’ ಎಂದು ಹೇಳಿದರು.</p>.<p>ಭಾರತೀಯ ಸಿನಿಮಾ ಮಾಧ್ಯಮವು ಕಾರ್ಮಿಕ ವರ್ಗವನ್ನು ಅಲಕ್ಷಿಸಿದೆ. ಸಣ್ಣ ಚಿತ್ರಗಳ ಮೂಲಕ ಕಾರ್ಮಿಕರ ಸಂಕಷ್ಟ, ಹೋರಾಟವನ್ನು ತೋರಿಸುವ ಪ್ರಯತ್ನ ಇದು ಎಂದರು.</p>.<p>ಅಂತರರಾಷ್ಟ್ರೀಯ ಡಾಕ್ಯುಮೆಂಟರಿ ಚಲನಚಿತ್ರೋತ್ಸವದಲ್ಲಿ ಪ್ರಥಮ ಸ್ಥಾನ ಪಡೆದ ಈ ಚಿತ್ರವು 60 ನಿಮಿಷದ್ದಾಗಿದೆ. ಒಡಿಶಾ, ಮರಾಠಿ ಮತ್ತು ಹಿಂದಿ ಮಿಶ್ರಿತ ಭಾಷೆಯಲ್ಲಿರುವ ಚಿತ್ರವು ಮಹೇಶನ ಪ್ರಯಾಣದ ವೇಳೆ ದಾರಿ ತಪ್ಪುವುದು, ಸೈಕಲ್ ಹಾಳಾಗುವುದು, ಗುಡ್ಡ ಏರುವುದು, ರಾತ್ರಿ ಪ್ರಯಾಣ, ಸ್ನೇಹಿತರೊಂದಿಗೆ ಚರ್ಚೆಗಳನ್ನು ಕಟ್ಟಿಕೊಡುತ್ತದೆ.</p>.<p>ಸಂವಾದ ಕಾರ್ಯಕ್ರಮದಲ್ಲಿ ಚಳವಳಿಗಾರ ವಿ.ಎಸ್. ಶ್ರೀಧರ್, ಗೌರಿ ಸ್ಮಾರಕ ಟ್ರಸ್ಟ್ ಅಧ್ಯಕ್ಷೆ ತೀಸ್ತಾ ಸೆಟಲ್ವಾಡ್, ಉಪಾಧ್ಯಕ್ಷೆ ಕವಿತಾ ಲಂಕೇಶ್, ಕಾರ್ಯದರ್ಶಿ ಪ್ರದೀಪ್, ಸಂಭಾಷಣೆಗಾರ್ತಿ ಗುರ್ಲನ್ ಜಡ್ಜ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>