‘1919ರಲ್ಲಿ ಪ್ರಕಟಗೊಂಡ ಅವರ ‘ಚಂದ್ರ’ ಕವಿತೆಯು ವಿಮರ್ಶಕರ ಕಣ್ಣಿಗೆ ಅಜ್ಞಾತವಾಗಿ ಉಳಿಯಿತು. ಅವರ ಕಾವ್ಯದಲ್ಲಿ ಬೌದ್ಧ ತಾತ್ವಿಕತೆಯನ್ನು ಗುರುತಿಸಬಹುದಾಗಿದೆ. ನವೋದಯ, ಪ್ರಗತಿಶೀಲ, ನವ್ಯ, ದಲಿತ, ಬಂಡಾಯಕ್ಕೂ ಅವರ ಕಾವ್ಯದ ಮೂಲಕ ಉದಾಹರಣೆ ನೀಡಬಹುದು. ನಮ್ಮ ಸಾಹಿತ್ಯ ವಿಮರ್ಶೆ ಹಾಗೂ ಸಂಶೋಧನೆಗಳು ಚೌಕಟ್ಟನ್ನು ಅಳವಡಿಸಿಕೊಂಡಿವೆ. ನಿಸರ್ಗ ಮತ್ತು ಪ್ರಕೃತಿಯ ನಡುವೆ ಸೃಷ್ಟಿ ವಿರೋಧವನ್ನು ಬೇಂದ್ರೆ ಅವರ ಕಾವ್ಯದಲ್ಲಿ ಕಾಣುತ್ತೇವೆ’ ಎಂದು ಹೇಳಿದರು.