<p><strong>ಬೆಂಗಳೂರು</strong>: ‘ವಚನ ಹಾಗೂ ದಾಸ ಸಾಹಿತ್ಯ ಕರ್ನಾಟಕದ ಕೊಡುಗೆ. ಈಗಲೂ ಇವುಗಳನ್ನು ಜನರಿಗೆ ತಲುಪಿಸಲು ಕಲಾವಿದರು ನಿರಂತರವಾಗಿ ಪ್ರಯತ್ನಿಸುತ್ತಿರುವುದು ಶ್ಲಾಘನೀಯ’ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಹೇಳಿದರು.</p>.<p>ಸತೀಶ್ ಹಂಪಿಹೊಳಿ ಮ್ಯೂಸಿಕ್ ಫೌಂಡೇಷನ್ ಜೆಎಸ್ಎಸ್ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ದಾಸ ನಿರಂತರ ಸಂಗೀತೋತ್ಸವ ಹಾಗೂ ಪಂ.ಆರ್.ವಿ.ಶೇಷಾದ್ರಿ ಗವಾಯಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.</p>.<p>‘12ನೇ ಶತಮಾನದಲ್ಲಿ ವಚನ ಸಾಹಿತ್ಯ ಪ್ರವರ್ಧಮಾನಕ್ಕೆ ಬಂದಿತು. 15ನೇ ಶತಮಾನದಲ್ಲಿ ದಾಸ ಸಾಹಿತ್ಯಕ್ಕೆ ಒತ್ತು ಸಿಕ್ಕಿತು. ಈ ಸಾಹಿತ್ಯದಲ್ಲಿನ ಉತ್ತಮ ವಿಚಾರಗಳು ಈಗಲೂ ಪ್ರಸ್ತುತವಾಗಿವೆ’ ಎಂದರು.</p>.<p>ಕಲಾವಿದ ಶ್ರೀನಿವಾಸಪ್ರಭು ಅವರು ಉತ್ಸವಕ್ಕೆ ಚಾಲನೆ ನೀಡಿ, ‘ಸಂಗೀತೋತ್ಸವವನ್ನು ಆಯೋಜಿಸುವುದು ಕಷ್ಟದ ಕೆಲಸ. ಎಲ್ಲ ಕಲಾವಿದರನ್ನು ಒಟ್ಟಿಗೆ ಸೇರಿಸಿ ಜನರನ್ನು ಸೆಳೆದು ಉದ್ದೇಶ ಈಡೇರುವಂತೆ ಮಾಡುವ ಇಂತಹ ಕೆಲಸಕ್ಕೆ ಸಮಾಜದ ಬೆಂಬಲವೂ ಸಿಗಲಿ’ ಎಂದು ಆಶಿಸಿದರು.</p>.<p>ಸಂಘಟಕ ಸತೀಶ್ ಹಂಪಿಹೊಳಿ, ಕವಯತ್ರಿ ರಂಜನಿ ಪ್ರಭು, ಕಥಕ್ ನೃತ್ಯಗಾರ್ತಿ ಪೂರ್ಣಾ ಆಚಾರ್ಯ, ಶೈಲೇಂದ್ರ ಶರ್ಮಾ, ಹಿಂದೂಸ್ತಾನಿ ಗಾಯಕ ಅಶ್ವಿನ್ ಬಾಳಿಗಾ ಹಾಜರಿದ್ದರು. ಕಲಾವಿದ ವಾಗೀಶ್ ಭಟ್ ಅವರು ಪಂ.ಆರ್.ವಿ. ಶೇಷಾದ್ರಿ ಗವಾಯಿ ಪ್ರಶಸ್ತಿ ಸ್ವೀಕರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ವಚನ ಹಾಗೂ ದಾಸ ಸಾಹಿತ್ಯ ಕರ್ನಾಟಕದ ಕೊಡುಗೆ. ಈಗಲೂ ಇವುಗಳನ್ನು ಜನರಿಗೆ ತಲುಪಿಸಲು ಕಲಾವಿದರು ನಿರಂತರವಾಗಿ ಪ್ರಯತ್ನಿಸುತ್ತಿರುವುದು ಶ್ಲಾಘನೀಯ’ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಹೇಳಿದರು.</p>.<p>ಸತೀಶ್ ಹಂಪಿಹೊಳಿ ಮ್ಯೂಸಿಕ್ ಫೌಂಡೇಷನ್ ಜೆಎಸ್ಎಸ್ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ದಾಸ ನಿರಂತರ ಸಂಗೀತೋತ್ಸವ ಹಾಗೂ ಪಂ.ಆರ್.ವಿ.ಶೇಷಾದ್ರಿ ಗವಾಯಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.</p>.<p>‘12ನೇ ಶತಮಾನದಲ್ಲಿ ವಚನ ಸಾಹಿತ್ಯ ಪ್ರವರ್ಧಮಾನಕ್ಕೆ ಬಂದಿತು. 15ನೇ ಶತಮಾನದಲ್ಲಿ ದಾಸ ಸಾಹಿತ್ಯಕ್ಕೆ ಒತ್ತು ಸಿಕ್ಕಿತು. ಈ ಸಾಹಿತ್ಯದಲ್ಲಿನ ಉತ್ತಮ ವಿಚಾರಗಳು ಈಗಲೂ ಪ್ರಸ್ತುತವಾಗಿವೆ’ ಎಂದರು.</p>.<p>ಕಲಾವಿದ ಶ್ರೀನಿವಾಸಪ್ರಭು ಅವರು ಉತ್ಸವಕ್ಕೆ ಚಾಲನೆ ನೀಡಿ, ‘ಸಂಗೀತೋತ್ಸವವನ್ನು ಆಯೋಜಿಸುವುದು ಕಷ್ಟದ ಕೆಲಸ. ಎಲ್ಲ ಕಲಾವಿದರನ್ನು ಒಟ್ಟಿಗೆ ಸೇರಿಸಿ ಜನರನ್ನು ಸೆಳೆದು ಉದ್ದೇಶ ಈಡೇರುವಂತೆ ಮಾಡುವ ಇಂತಹ ಕೆಲಸಕ್ಕೆ ಸಮಾಜದ ಬೆಂಬಲವೂ ಸಿಗಲಿ’ ಎಂದು ಆಶಿಸಿದರು.</p>.<p>ಸಂಘಟಕ ಸತೀಶ್ ಹಂಪಿಹೊಳಿ, ಕವಯತ್ರಿ ರಂಜನಿ ಪ್ರಭು, ಕಥಕ್ ನೃತ್ಯಗಾರ್ತಿ ಪೂರ್ಣಾ ಆಚಾರ್ಯ, ಶೈಲೇಂದ್ರ ಶರ್ಮಾ, ಹಿಂದೂಸ್ತಾನಿ ಗಾಯಕ ಅಶ್ವಿನ್ ಬಾಳಿಗಾ ಹಾಜರಿದ್ದರು. ಕಲಾವಿದ ವಾಗೀಶ್ ಭಟ್ ಅವರು ಪಂ.ಆರ್.ವಿ. ಶೇಷಾದ್ರಿ ಗವಾಯಿ ಪ್ರಶಸ್ತಿ ಸ್ವೀಕರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>