ವಿದ್ಯಾರ್ಥಿಗಳಲ್ಲದೆ ಪೋಷಕರು ಮತ್ತು ಶಿಕ್ಷಕರೂ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಜೂನ್ 28ರ ಬೆಳಿಗ್ಗೆ 11ಕ್ಕೆ ಈ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ನಿವೃತ್ತ ಐಎಎಸ್ ಅಧಿಕಾರಿ ಎಂ.ಎನ್. ವಿದ್ಯಾಶಂಕರ್, ಗೂಗಲ್ ಕಂಪನಿಯ ಭಾರತದ ಬಿಸಿನೆಸ್ ಹೆಡ್ ರುಚಿತಾ ಅಗರ್ವಾಲ್, ವಿಶ್ವವಿದ್ಯಾಲಯದ ಕುಲಪತಿ ಡಾ. ಕೆ.ಎನ್.ಬಿ. ಮೂರ್ತಿ, ಡೀನ್ ಡಾ.ಎ.ಸಿ. ಅಶೋಕ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ.