<p><strong>ಬೆಂಗಳೂರು</strong>: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಸಿಇಟಿ ಮತ್ತು ನೀಟ್ ಪರೀಕ್ಷೆಗೆ ಅನುಕೂಲ ಆಗುವಂತೆ ವಿಶೇಷ ಆನ್ಲೈನ್ ತರಬೇತಿಯನ್ನು ದಯಾನಂದ ಸಾಗರ ವಿಶ್ವವಿದ್ಯಾಲಯ(ಡಿಎಸ್ಯು) ಆರಂಭಿಸಿದೆ.</p>.<p>ದಯಾನಂದ ಸಾಗರ ಎಂಜಿನಿಯರಿಂಗ್ ಕಾಲೇಜು, ದಯನಂದ ಸಾಗರ ತಾಂತ್ರಿಕ ಮತ್ತು ನಿರ್ವಹಣಾ ಕಾಲೇಜಿನ ಸಹಯೋಗದಲ್ಲಿಪ್ರತಿ ವರ್ಷ ಉಚಿತ ತರಬೇತಿ ನೀಡಲಾಗುತ್ತಿದೆ. ಕೋವಿಡ್–19 ಇರುವ ಕಾರಣ ಈ ಬಾರಿ ಆನ್ಲೈನ್ ತರಬೇತಿ ನೀಡಲು ಮುಂದಾಗಿದೆ.</p>.<p>‘ಜೂ. 12ರಂದು ಕೋರ್ಸ್ ಆರಂಭವಾಗಲಿದೆ. ಜುಲೈ 27ರಂದು ಕೋರ್ಸ್ ಮುಕ್ತಾಯವಾಗಲಿದೆ.ಜುಲೈ 15 ರಿಂದ 18 ರವರೆಗೆ ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆಗೆ ವಿರಾಮ ನೀಡಲಾಗುವುದು. ವೇಳಾಪಟ್ಟಿ ವಿವರವನ್ನು ಡಿಎಸ್ಯು ವೆಬ್ಸೈಟ್ನಲ್ಲಿ ಪ್ರಕಟಿಸಲಾಗುವುದು’ ಎಂದು ವಿಶ್ವವಿದ್ಯಾಲಯ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.</p>.<p>‘ಪ್ರತಿ ಭಾನುವಾರ ಬೆಳಿಗ್ಗೆ 11 ರಿಂದ ಮಧ್ಯಾಹ್ನ 12 ರವರೆಗೆವೃತ್ತಿ ಜೀವನದ ಆಯ್ಕೆಗಳ ಕುರಿತು ತಜ್ಞರು ವೆಬಿನಾರ್ಗಳಲ್ಲಿ ಮಾತನಾಡಲಿದ್ದಾರೆ. ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಆಹ್ವಾನಿಸಲಾಗುತ್ತದೆ. ವೆಬಿನಾರ್ಗಳಲ್ಲಿ ಭಾಗವಹಿಸಲು3,150 ವಿದ್ಯಾರ್ಥಿಗಳು ಈಗಾಗಲೇ ಆಸಕ್ತಿ ತೋರಿಸಿದ್ದಾರೆ’ ಎಂದು ವಿವರಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಸಿಇಟಿ ಮತ್ತು ನೀಟ್ ಪರೀಕ್ಷೆಗೆ ಅನುಕೂಲ ಆಗುವಂತೆ ವಿಶೇಷ ಆನ್ಲೈನ್ ತರಬೇತಿಯನ್ನು ದಯಾನಂದ ಸಾಗರ ವಿಶ್ವವಿದ್ಯಾಲಯ(ಡಿಎಸ್ಯು) ಆರಂಭಿಸಿದೆ.</p>.<p>ದಯಾನಂದ ಸಾಗರ ಎಂಜಿನಿಯರಿಂಗ್ ಕಾಲೇಜು, ದಯನಂದ ಸಾಗರ ತಾಂತ್ರಿಕ ಮತ್ತು ನಿರ್ವಹಣಾ ಕಾಲೇಜಿನ ಸಹಯೋಗದಲ್ಲಿಪ್ರತಿ ವರ್ಷ ಉಚಿತ ತರಬೇತಿ ನೀಡಲಾಗುತ್ತಿದೆ. ಕೋವಿಡ್–19 ಇರುವ ಕಾರಣ ಈ ಬಾರಿ ಆನ್ಲೈನ್ ತರಬೇತಿ ನೀಡಲು ಮುಂದಾಗಿದೆ.</p>.<p>‘ಜೂ. 12ರಂದು ಕೋರ್ಸ್ ಆರಂಭವಾಗಲಿದೆ. ಜುಲೈ 27ರಂದು ಕೋರ್ಸ್ ಮುಕ್ತಾಯವಾಗಲಿದೆ.ಜುಲೈ 15 ರಿಂದ 18 ರವರೆಗೆ ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆಗೆ ವಿರಾಮ ನೀಡಲಾಗುವುದು. ವೇಳಾಪಟ್ಟಿ ವಿವರವನ್ನು ಡಿಎಸ್ಯು ವೆಬ್ಸೈಟ್ನಲ್ಲಿ ಪ್ರಕಟಿಸಲಾಗುವುದು’ ಎಂದು ವಿಶ್ವವಿದ್ಯಾಲಯ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.</p>.<p>‘ಪ್ರತಿ ಭಾನುವಾರ ಬೆಳಿಗ್ಗೆ 11 ರಿಂದ ಮಧ್ಯಾಹ್ನ 12 ರವರೆಗೆವೃತ್ತಿ ಜೀವನದ ಆಯ್ಕೆಗಳ ಕುರಿತು ತಜ್ಞರು ವೆಬಿನಾರ್ಗಳಲ್ಲಿ ಮಾತನಾಡಲಿದ್ದಾರೆ. ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಆಹ್ವಾನಿಸಲಾಗುತ್ತದೆ. ವೆಬಿನಾರ್ಗಳಲ್ಲಿ ಭಾಗವಹಿಸಲು3,150 ವಿದ್ಯಾರ್ಥಿಗಳು ಈಗಾಗಲೇ ಆಸಕ್ತಿ ತೋರಿಸಿದ್ದಾರೆ’ ಎಂದು ವಿವರಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>