ಘಟನೆಯ ಬಗ್ಗೆ ಸ್ಥಳೀಯರು ಬೆಳಿಗ್ಗೆ 8ಗಂಟೆಗೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಆದರೆ, ಹತ್ತು ಗಂಟೆಯಾದರೂ ಪೊಲೀಸರುಸ್ಥಳಕ್ಕೆ ಬಂದಿರಲಿಲ್ಲ. ಮಾಂಸದ ಮುದ್ದೆಯಾಗಿದ್ದ ಶವನಾಲ್ಕೈದು ತಾಸು ಹಳಿಗಳ ಮೇಲೆ ಅನಾಥವಾಗಿ ಬಿದ್ದಿತ್ತು.ತುಂಡಾದ ಕೈಕಾಲುಗಳನ್ನು ಕಾಗೆ, ಹದ್ದು ಮತ್ತು ನಾಯಿಗಳು ಕಿತ್ತು ತಿನ್ನುತ್ತಿದ್ದ ದೃಶ್ಯ ಭೀಕರವಾಗಿತ್ತು.