ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲಿನಡಿ ಸಿಲುಕಿ ವ್ಯಕ್ತಿ ಸಾವು

Last Updated 23 ಜೂನ್ 2020, 5:43 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಮಲ್ಲೇಶ್ವರ ರೈಲು ನಿಲ್ದಾಣದಲ್ಲಿ ಮಂಗಳವಾರ ಬೆಳಗಿನ ಜಾವ ಅಪರಿಚಿತ ವ್ಯಕ್ತಿಯೊಬ್ಬ ರೈಲಿಗೆ ಸಿಲುಕಿ ಮೃತಪಟ್ಟಿದ್ದಾನೆ.

ಮೃತ ವ್ಯಕ್ತಿ ಸುಮಾರು 40–45 ವರ್ಷದವನಾಗಿದ್ದು, ರೈಲು ಗುದ್ದಿದ ರಭಸಕ್ಕೆ ದೇಹಗುರುತು ಸಿಗಲಾರ ದಷ್ಟು ಛಿದ್ರ, ಛಿದ್ರವಾಗಿದೆ.

ಘಟನೆಯ ಬಗ್ಗೆ ಸ್ಥಳೀಯರು ಬೆಳಿಗ್ಗೆ 8ಗಂಟೆಗೆ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದ್ದರು. ಆದರೆ, ಹತ್ತು ಗಂಟೆಯಾದರೂ ಪೊಲೀಸರುಸ್ಥಳಕ್ಕೆ ಬಂದಿರಲಿಲ್ಲ. ಮಾಂಸದ ಮುದ್ದೆಯಾಗಿದ್ದ ಶವನಾಲ್ಕೈದು ತಾಸು ಹಳಿಗಳ ಮೇಲೆ ಅನಾಥವಾಗಿ ಬಿದ್ದಿತ್ತು.ತುಂಡಾದ ಕೈಕಾಲುಗಳನ್ನು ಕಾಗೆ, ಹದ್ದು ಮತ್ತು ನಾಯಿಗಳು ಕಿತ್ತು ತಿನ್ನುತ್ತಿದ್ದ ದೃಶ್ಯ ಭೀಕರವಾಗಿತ್ತು.

ಈ ವ್ಯಕ್ತಿ ಬೆಳಗಿನ ಜಾವ ರೈಲು ನಿಲ್ದಾಣದಲ್ಲಿ ಓಡಾಡುವುದನ್ನು ಗಮನಿಸಿದ್ದಾಗಿ ಪ್ರತ್ಯಕ್ಷ್ಯದರ್ಶಿಯೊಬ್ಬರು ತಿಳಿಸಿದರು. ಬಹುಶಃ ಬೆಳಗ್ಗೆ 6.30 ಗಂಟೆಗೆ ಘಟನೆ ಸಂಭವಿಸಿರಬಹುದು ಎಂದು ಹೇಳಿದರು.

ಕೊರೊನಾ ಸೋಂಕಿನ ಭೀತಿಯಿಂದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಸ್ಥಳದಲ್ಲಿದ್ದ ಮತ್ತೊಬ್ಬರು ತಿಳಿಸಿದರು.

‘ಇದು ಆತ್ಮಹತ್ಯೆಯೋ ಅಥವಾ ಆಕಸ್ಮಿಕ ಘಟನೆಯೋ ಎನ್ನುವುದು ಇನ್ನೂ ಖಚಿತವಾಗಿಲ್ಲ. ಸ್ಥಳದಲ್ಲಿ ಯಾವ ವಸ್ತುಗಳೂ ದೊರೆತಿಲ್ಲ. ಮುಖ ಗುರುತಿಸಲಾಗದಷ್ಟು ವಿಕಾರವಾಗಿದೆ. ವಾರಸುದಾರರನ್ನು ಪತ್ತೆ ಹಚ್ಚಲು ಯತ್ನಿಸುತ್ತಿದ್ದೇವೆ’ ಎಂದು ಪೊಲೀಸ್‌ ಅಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT