ಖಾಸ್ಬಾಗ್ನ ಮೃತ ನಾಗರಾಜ್ ಅವರ ಕುಟುಂಬದ ಕೆಲವರು ಅನಾರೋಗ್ಯದಿಂದ ಬಳಲುತ್ತಿದ್ದರು. ಅವರಿಗೆ ಕೊರೊನಾ ಇರಬಹುದೆಂದು ಸ್ಥಳೀಯರು ಅನುಮಾನಿಸಿ ಮಾತನಾಡಲಾರಂಭಿಸಿದ್ದರು. ಕೆಲವರ ಗಂಟಲಿನ ದ್ರವದ ವರದಿ ಪಾಸಿಟಿವ್ ಬಂದಿತ್ತು. ಅವರ ಜೊತೆ ಒಡನಾಟವಿಟ್ಟುಕೊಂಡಿದ್ದ ಎಂಬ ಕಾರಣಕ್ಕೆ ನಾಗರಾಜ್ ಅವರನ್ನು ಹಲವರು ಹೀಯಾಳಿಸುತ್ತಿದ್ದರು. ಅದರಿಂದ ನಾಗರಾಜ್ ನೊಂದಿದ್ದರು ಎನ್ನಲಾಗಿದೆ. ಅದರಿಂದಾಗಿ ಅವರು ಮನೆ ಬಿಟ್ಟು ಹೋಗಿದ್ದರು.