ಮಕ್ಕಳಿಗೆ ಕ್ರಿಕೆಟ್ ಬ್ಯಾಟ್, ಬಾಲ್, ಷಟಲ್ ಬ್ಯಾಟ್, ಕಾಕ್, ಟೆನಿಕಾಯ್ಟ್ , ಚೆಸ್ ಬೋರ್ಡ್, ಕೇರಂ ಬೋರ್ಡ್, ವಾಲಿಬಾಲ್, ಫುಟ್ಬಾಲ್, ಸ್ಕಿಪ್ಪರ್ ಹಾಗೂ ಇತರ ಪರಿಕರ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಆಫ್ ಸಕ್ಕರೆನಾಡು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಕೆ.ಎಂ. ಮಹೇಶ್ ಮಾತನಾಡಿ ‘ಪಟಾಕಿ ಹಚ್ಚುವ ಮೂಲಕ ದೀಪಾವಳಿ ಹಬ್ಬ ಆಚರಣೆ ಮಾಡುವುದನ್ನು ತ್ಯಜಿಸಬೇಕು. ಸಮಾಜದಲ್ಲಿ ಮಕ್ಕಳಿಂದ ಮಾತ್ರ ಈ ಬದಲಾವಣೆ ಸಾಧ್ಯ. ನಾವು ನಮ್ಮ ಮನೆಯ ಮಕ್ಕಳಲ್ಲಿ ಪರಿಸರ ಕಾಳಜಿ ಮೂಡಿಸಿ ಪಟಾಕಿ ಹಚ್ಚದಂತೆ ಅವರ ಮನಸ್ಸು ಬದಲಾಯಿಸಬೇಕು. ನಂತರ ಬೇರೆ ಮಕ್ಕಳಿಗೂ ಈ ಬಗ್ಗೆ ಜಾಗೃತಿ ಮೂಡಿಸಬೇಕು’ ಎಂದು ಹೇಳಿದರು.