ನಗರದ ಹೊಸೂರು ರಸ್ತೆಯ ವೆಲ್ಲಾರ ವೃತ್ತದ ಬಳಿ ಇರುವ ಆಲ್ಸೇಂಟ್ ಚರ್ಚ್ಗೆ ಹೊಂದಿಕೊಂಡಿ ರುವ 7,426.8 ಚದರ ಮೀಟರ್ ಜಾಗವನ್ನು ಬಿಎಂಆರ್ಸಿಎಲ್ಗೆ ಹಸ್ತಾಂತರಿಸಲು ಚರ್ಚ್ ಒಪ್ಪಂದ ಮಾಡಿಕೊಂಡಿತ್ತು. ಇದಕ್ಕೆ ಪ್ರತಿಯಾಗಿ ₹ 59.29 ಕೋಟಿ ಮೊತ್ತದ ಪರಿಹಾರವನ್ನು ಬಿಎಂಆರ್ಸಿಎಲ್, ಚರ್ಚ್ಗೆ ನೀಡಿತ್ತು. ಇದು ರಕ್ಷಣಾ ಸಚಿವಾಲಯಕ್ಕೆ ಸೇರಿದ ಜಾಗ. ಇದನ್ನು ಅಕ್ರಮವಾಗಿ ಬಿಎಂಆರ್ಸಿಎಲ್ಗೆ ಹಸ್ತಾಂತರಿಸಲಾಗಿದೆ ಎಂದು ಅಶೋಕನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.