ಒಂದು ಎಕರೆ ಕಬ್ಬು ಬೆಳೆಗೆ ಕನಿಷ್ಠ 20 ಚೀಲ ರಸಗೊಬ್ಬರ ಬಳಸಲಾಗುತ್ತಿದೆ. ಅಂದರೆ, 20 ಚೀಲಕ್ಕೆ ಸರಾಸರಿ ₹40 ಸಾವಿರದಿಂದ ₹50 ಸಾವಿರ ರೈತರ ಹೆಸರಿನಲ್ಲಿ ಕಂಪನಿಗಳ ಪಾಲಾಗುತ್ತಿದೆ. ಇದರ ಬದಲು ರಸಗೊಬ್ಬರವನ್ನು ಮುಕ್ತ ಮಾರುಕಟ್ಟೆಯಲ್ಲಿ ವಿತರಿಸಿ ಸಹಾಯಧನವನ್ನು ರೈತರಿಗೆ ನೇರವಾಗಿ ಕೃಷಿ ಉತ್ಪನ್ನಗಳ ಮಾನದಂಡದ ಆಧಾರದ ಮೇಲೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.