<p><strong>ಬೆಂಗಳೂರು</strong>: ಕನಕಪುರ ರಸ್ತೆಯ ಸಿಲ್ಕ್ ಇನ್ಸ್ಟಿಟ್ಯೂಟ್ ಮೆಟ್ರೊ ನಿಲ್ದಾಣ ಸಮೀಪದಲ್ಲಿರುವ ಮಂಡಲ ಸಾಂಸ್ಕೃತಿಕ ಕೇಂದ್ರದಲ್ಲಿ ಧಾತು ಬೊಂಬೆಗಳ ಥಿಯೇಟರ್ ಜನವರಿ 9ರಿಂದ ಮೂರು ದಿನ ಧಾತು ಅಂತರರಾಷ್ಟ್ರೀಯ ಬೊಂಬೆಯಾಟ ಉತ್ಸವ ಹಮ್ಮಿಕೊಂಡಿದೆ.</p>.<p>ಕರ್ನಾಟಕದ ನಾನಾ ಭಾಗಗಳ ಕಲಾವಿದರು ತಾವೇ ರೂಪಿಸಿಕೊಂಡಿರುವ ಬೊಂಬೆಗಳನ್ನು ಬಳಸಿ ರಾಮಾಯಣ, ಮಹಾಭಾರತ ಸಹಿತ ಪ್ರಮುಖ ಪ್ರಸಂಗಗಳ ಪ್ರದರ್ಶನ ನೀಡುವರು. ಇಟಲಿಯ ಕಲಾವಿದರ ತಂಡವೂ ಬೊಂಬೆ ಪ್ರದರ್ಶನ ನೀಡಲಿದೆ.</p>.<p>ಈಚನೂರು ಶೈಲಿಯ ತಂತಿ ಬೊಂಬೆ, ಮೂಡಲಪಾಯ, ದೊಡ್ಡಾಟ, ಯಕ್ಷಗಾನ, ಸೂತ್ರದ ಬೊಂಬೆ, ಮರದ ಬೊಂಬೆ, ಸಲಾಕಿ ಬೊಂಬೆ, ಕೀಲು ಬೊಂಬೆ, ತಾರಮ್ಮಯ್ಯ ಬೊಂಬೆಗಳು ಉತ್ಸವದ ಆಕರ್ಷಣೆಯಾಗಲಿವೆ.</p>.<p>ಅಮೆರಿಕದಲ್ಲಿ ಎಂಜಿನಿಯರ್ ಆಗಿರುವ ನಗರದ ಅನುಪಮಾ ಹೊಸಕೆರೆ ಅವರು, ಮೂರು ದಶಕದಿಂದ ಕರ್ನಾಟಕ ಮಾತ್ರವಲ್ಲದೇ ದೇಶದ ನಾನಾ ರಾಜ್ಯಗಳ ಬೊಂಬೆಗಳು, ಹಲವು ದೇಶಗಳ ಬೊಂಬೆಗಳನ್ನು ಸಂಗ್ರಹಿಸಿ ನಾಲ್ಕು ವರ್ಷದ ಹಿಂದೆ ತಲಘಟ್ಟಪುರದಲ್ಲಿ ಧಾತು ಬೊಂಬೆಗಳ ಥಿಯೇಟರ್ ರೂಪಿಸಿದ್ದಾರೆ. </p>.<p>ಥಿಯೇಟರ್ನಲ್ಲಿ ನಿಯಮಿತವಾಗಿ ಬೊಂಬೆಗಳ ಪ್ರದರ್ಶನಕ್ಕೂ ಅವಕಾಶವಿದೆ. ಮಕ್ಕಳು, ಆಸಕ್ತರಿಗೂ ವಾರಾಂತ್ಯ ಬೊಂಬೆಗಳ ಕುರಿತ ಕಾರ್ಯಾಗಾರಗಳನ್ನು ಆಯೋಜಿಸಲಾಗುತ್ತಿದೆ. 16ನೇ ಆವೃತ್ತಿಯ ಬೊಂಬೆಯಾಟ ಉತ್ಸವಕ್ಕೆ ಥಿಯೇಟರ್ ಸಿದ್ದವಾಗುತ್ತಿದೆ ಎಂದು ಅನುಪಮಾ ತಿಳಿಸಿದರು.</p>. <p> <strong>ಉಚಿತ ಪ್ರವೇಶ ‘</strong></p><p>ಬಾಲಕಿಯಾಗಿದ್ದಾಗ ಕೇಳುತ್ತಿದ್ದ ಕಥೆಯಿಂದ ಬೊಂಬೆಗಳ ಮೇಲೆ ಆಸಕ್ತಿ ಮೂಡಿತು. ಆನಂತರ ಬೊಂಬೆ ಸಂಗ್ರಹ ಹವ್ಯಾಸವಾಗಿ ಥಿಯೇಟರ್ ರೂಪಿಸಿ ಅಂತರರಾಷ್ಟ್ರೀಯ ಉತ್ಸವ ಆಯೋಜಿಸುತ್ತಿದ್ದೇವೆ. ಉತ್ಸವಕ್ಕೆ ಪ್ರವೇಶ ಉಚಿತವಾಗಿರಲಿದೆ’ ಎಂದು ಬೊಂಬೆ ತಜ್ಞೆ ಅನುಪಮಾ ಹೊಸಕೆರೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಕನಕಪುರ ರಸ್ತೆಯ ಸಿಲ್ಕ್ ಇನ್ಸ್ಟಿಟ್ಯೂಟ್ ಮೆಟ್ರೊ ನಿಲ್ದಾಣ ಸಮೀಪದಲ್ಲಿರುವ ಮಂಡಲ ಸಾಂಸ್ಕೃತಿಕ ಕೇಂದ್ರದಲ್ಲಿ ಧಾತು ಬೊಂಬೆಗಳ ಥಿಯೇಟರ್ ಜನವರಿ 9ರಿಂದ ಮೂರು ದಿನ ಧಾತು ಅಂತರರಾಷ್ಟ್ರೀಯ ಬೊಂಬೆಯಾಟ ಉತ್ಸವ ಹಮ್ಮಿಕೊಂಡಿದೆ.</p>.<p>ಕರ್ನಾಟಕದ ನಾನಾ ಭಾಗಗಳ ಕಲಾವಿದರು ತಾವೇ ರೂಪಿಸಿಕೊಂಡಿರುವ ಬೊಂಬೆಗಳನ್ನು ಬಳಸಿ ರಾಮಾಯಣ, ಮಹಾಭಾರತ ಸಹಿತ ಪ್ರಮುಖ ಪ್ರಸಂಗಗಳ ಪ್ರದರ್ಶನ ನೀಡುವರು. ಇಟಲಿಯ ಕಲಾವಿದರ ತಂಡವೂ ಬೊಂಬೆ ಪ್ರದರ್ಶನ ನೀಡಲಿದೆ.</p>.<p>ಈಚನೂರು ಶೈಲಿಯ ತಂತಿ ಬೊಂಬೆ, ಮೂಡಲಪಾಯ, ದೊಡ್ಡಾಟ, ಯಕ್ಷಗಾನ, ಸೂತ್ರದ ಬೊಂಬೆ, ಮರದ ಬೊಂಬೆ, ಸಲಾಕಿ ಬೊಂಬೆ, ಕೀಲು ಬೊಂಬೆ, ತಾರಮ್ಮಯ್ಯ ಬೊಂಬೆಗಳು ಉತ್ಸವದ ಆಕರ್ಷಣೆಯಾಗಲಿವೆ.</p>.<p>ಅಮೆರಿಕದಲ್ಲಿ ಎಂಜಿನಿಯರ್ ಆಗಿರುವ ನಗರದ ಅನುಪಮಾ ಹೊಸಕೆರೆ ಅವರು, ಮೂರು ದಶಕದಿಂದ ಕರ್ನಾಟಕ ಮಾತ್ರವಲ್ಲದೇ ದೇಶದ ನಾನಾ ರಾಜ್ಯಗಳ ಬೊಂಬೆಗಳು, ಹಲವು ದೇಶಗಳ ಬೊಂಬೆಗಳನ್ನು ಸಂಗ್ರಹಿಸಿ ನಾಲ್ಕು ವರ್ಷದ ಹಿಂದೆ ತಲಘಟ್ಟಪುರದಲ್ಲಿ ಧಾತು ಬೊಂಬೆಗಳ ಥಿಯೇಟರ್ ರೂಪಿಸಿದ್ದಾರೆ. </p>.<p>ಥಿಯೇಟರ್ನಲ್ಲಿ ನಿಯಮಿತವಾಗಿ ಬೊಂಬೆಗಳ ಪ್ರದರ್ಶನಕ್ಕೂ ಅವಕಾಶವಿದೆ. ಮಕ್ಕಳು, ಆಸಕ್ತರಿಗೂ ವಾರಾಂತ್ಯ ಬೊಂಬೆಗಳ ಕುರಿತ ಕಾರ್ಯಾಗಾರಗಳನ್ನು ಆಯೋಜಿಸಲಾಗುತ್ತಿದೆ. 16ನೇ ಆವೃತ್ತಿಯ ಬೊಂಬೆಯಾಟ ಉತ್ಸವಕ್ಕೆ ಥಿಯೇಟರ್ ಸಿದ್ದವಾಗುತ್ತಿದೆ ಎಂದು ಅನುಪಮಾ ತಿಳಿಸಿದರು.</p>. <p> <strong>ಉಚಿತ ಪ್ರವೇಶ ‘</strong></p><p>ಬಾಲಕಿಯಾಗಿದ್ದಾಗ ಕೇಳುತ್ತಿದ್ದ ಕಥೆಯಿಂದ ಬೊಂಬೆಗಳ ಮೇಲೆ ಆಸಕ್ತಿ ಮೂಡಿತು. ಆನಂತರ ಬೊಂಬೆ ಸಂಗ್ರಹ ಹವ್ಯಾಸವಾಗಿ ಥಿಯೇಟರ್ ರೂಪಿಸಿ ಅಂತರರಾಷ್ಟ್ರೀಯ ಉತ್ಸವ ಆಯೋಜಿಸುತ್ತಿದ್ದೇವೆ. ಉತ್ಸವಕ್ಕೆ ಪ್ರವೇಶ ಉಚಿತವಾಗಿರಲಿದೆ’ ಎಂದು ಬೊಂಬೆ ತಜ್ಞೆ ಅನುಪಮಾ ಹೊಸಕೆರೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>