‘ಬುದ್ಧ-ಬಸವ-ಅಂಬೇಡ್ಕರ್ ಅವರು ಈ ದೇಶದ ಯುಗಪುರುಷರು. ಅವರು ಸಾಂಸ್ಕೃತಿಕ ಚಹರೆಯನ್ನು ಬದಲಾಯಿಸಿದರು. ಕಡು ಬಡತನದಲ್ಲಿ ಅರಳಿದ ಅಂಬೇಡ್ಕರ್, ಬಹು ಎತ್ತರಕ್ಕೆ ಏರಿದರು. ಅವರು ತಾವು ಬಂದ ಹಾದಿಯನ್ನು ಮರೆಯದೆ, ಎಲ್ಲ ರಂಗದಲ್ಲಿಯೂ ಸಮಾನತೆಗೆ ಪ್ರಯತ್ನಿಸಿದರು. ಅವರಿಗೆ ಸಾಮಾಜಿಕ ಸ್ವಾತಂತ್ರ್ಯವು ರಾಜಕೀಯ ಸ್ವಾತಂತ್ರ್ಯಕ್ಕಿಂತಲೂ ಮುಖ್ಯವಾಗಿತ್ತು. ಮಹಿಳೆಯರಿಗೆ ಸಮಾನತೆ ಹಕ್ಕ ದೊರಕುವಂತೆ ಮಾಡಲು ಅವರು ನಿರಂತರವಾಗಿ ಶ್ರಮಿಸಿದರು’ ಎಂದು ಹೇಳಿದರು.