‘ಬಿತ್ತನೆ ಬೀಜದಿಂದ ರಸಗೊಬ್ಬರವರೆಗೂ ರೈತರಿಗೆ ಪ್ರತಿ ಹಂತದಲ್ಲಿ ಮೋಸ ಮಾಡಲಾಗುತ್ತಿದೆ. ಶೇ 40 ಕಮಿಷನ್ ಜೊತೆಗೆ ಶೇ 50 ರಷ್ಟು ಹೆಚ್ಚಿನಬೆಲೆಗೆ ಗೊಬ್ಬರ ಮಾರಾಟ ಮಾಡಲಾಗುತ್ತಿದೆ. ಬೇರೆ ದೇಶಗಳಲ್ಲಿ ಯುದ್ಧ ನಡೆಯುತ್ತಿದೆ ಎಂಬ ನೆಪ ಹೇಳಿ, ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಏರಿಕೆ ಮೂಲಕ ವಂಚಿಸಿದ ರೀತಿ ರಸಗೊಬ್ಬರದಲ್ಲೂ ಲೂಟಿ ಮಾಡಲಾಗುತ್ತಿದೆ. ಖಾಸಗಿ, ಬೇರೆ ಸಂಸ್ಥೆಗಳ ಮೂಲಕ ರಸಗೊಬ್ಬರವನ್ನು ಕಾಳಸಂತೆಯಲ್ಲಿ ಸರ್ಕಾರ ಮಾರಾಟ ಮಾಡುತ್ತಿದೆ’ ಎಂದರು.