‘ಪಾಸ್ಬುಕ್ನ ಮೇಲೆ ಭಾರತೀಯ ಸ್ಟೇಟ್ ಬ್ಯಾಂಕ್ ಎಂದು ಕನ್ನಡ, ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ಮುದ್ರಿಸಲಾಗು
ತ್ತದೆ. ಆದರೆ, ಚಾಮರಾಜನಗರ ಶಾಖೆಯ ಪಾಸ್ಬುಕ್ನಲ್ಲಿ ಕನ್ನಡವನ್ನು ಕಡೆಗಣಿಸಲಾಗಿದೆ. ಕೇಂದ್ರ ಸ್ವಾಮ್ಯದ ಎಲ್ಲ ಬ್ಯಾಂಕುಗಳು ಪ್ರಾದೇಶಿಕ ಭಾಷೆಗಳಿಗೆ ಆದ್ಯತೆ ನೀಡಬೇಕೆಂಬ ನಿಯಮವಿದೆ. ಆದರೆ, ಈಗ ಭಾರತೀಯ ಸ್ಟೇಟ್ ಬ್ಯಾಂಕ್ ಈ ನಿಯಮವನ್ನು ಗಾಳಿಗೆ ತೂರಿದೆ. ಭಾಷಾ ನೀತಿಗೆ ಕೂಡ ಇದು ವಿರುದ್ಧವಾಗಿದೆ. 1968ರಲ್ಲಿ ಕೇಂದ್ರ ಸರ್ಕಾರವೇ ಜಾರಿಗೆ ತಂದಿರುವ ತ್ರಿಭಾಷಾ ಸೂತ್ರವನ್ನಾದರೂ ಅಳವಡಿಸಿಕೊಳ್ಳದಿರು
ವುದು ದುರದೃಷ್ಟಕರ’ ಎಂದು ಬಳಿಗಾರ್ ಅವರು ಪತ್ರದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.