ಚಿಕ್ಕಮಗಳೂರು ಜಿಲ್ಲೆಯಶೃಂಗೇರಿಯಲ್ಲಿ ಮಾತನಾಡಿದ್ದ ಎಚ್.ಡಿ.ಕುಮಾರಸ್ವಾಮಿ, ‘ಮಂಗಳೂರಿನ ವಿಮಾನ ನಿಲ್ದಾಣದ ಬಳಿ ಬಾಂಬ್ ಇಟ್ಟಿದ್ದು ಯಾರು ಎಂಬುದನ್ನು ಪತ್ತೆ ಹಚ್ಚಬೇಕು. ಪೊಲೀಸರು ಪತ್ತೆ ಕಾರ್ಯಕ್ಕೆ 15 ದಿನ ಅಥವಾ ತಿಂಗಳು ಸಮಯ ತೆಗೆದುಕೊಂಡು ಹೊಸ ಕತೆ ಸೃಷ್ಟಿಸಬಾರದು.ಕೆಲವರನ್ನು ಮೆಚ್ಚಿಸಲು ಅಧಿಕಾರಿಗಳು ಸಂಶಯಾತ್ಮಕ ಹೇಳಿಕೆ ನೀಡುತ್ತಾರೆ. ಅದಕ್ಕೆ ಆಸ್ಪದ ನೀಡಬಾರದು. ಸಂಘರ್ಷಕ್ಕೆ ಎಡೆಮಾಡಬಾರದು’ ಎಂದು ಹೇಳಿದ್ದರು.