ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಕಣದಲ್ಲಿ 14 ಪದವೀಧರರು

ಇಬ್ಬರು ಶಾಲೆಯ ಮೆಟ್ಟಿಲು ಹತ್ತಿಲ್ಲ; ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಮಾಹಿತಿ
Last Updated 4 ಮೇ 2018, 9:29 IST
ಅಕ್ಷರ ಗಾತ್ರ

ಗದಗ: ಜಿಲ್ಲೆಯ ನಾಲ್ಕೂ ವಿಧಾನಸಭಾ ಮತಕ್ಷೇತ್ರಗಳು ಸೇರಿ ಒಟ್ಟು 42 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇವರಲ್ಲಿ 14 ಮಂದಿ ಪದವೀಧರರಿದ್ದಾರೆ. ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್‌ ಮಾಹಿತಿ ಪ್ರಕಾರ ಅಭ್ಯರ್ಥಿಗಳಲ್ಲಿ ಇಬ್ಬರು ಶಾಲೆಯ ಮೆಟ್ಟಿಲನ್ನೇ ಹತ್ತಿಲ್ಲ. ಇವರು ವಿದ್ಯಾರ್ಹತೆ  ಕೋಷ್ಟಕದಲ್ಲಿ ‘ಇಲ್ಲ’ ಎಂದು ನಮೂದಿಸಿದ್ದಾರೆ. 10ನೇ ತರಗತಿ ಒಳಗಿನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳ ಸಂಖ್ಯೆ 6.

ರೋಣ ಮತಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ರವೀಂದ್ರನಾಥ ದೊಡ್ಡಮೇಟಿ ಮತ್ತು ಶಿರಹಟ್ಟಿ ಮೀಸಲು ಕ್ಷೇತ್ರದಿಂದ ಜನಹಿತ ಪಕ್ಷ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಅರುಣಕುಮಾರ್ ತಿರ್ಲಾಪುರ ಸ್ನಾತಕೋತ್ತರ ಪದವೀಧರರು. ರೋಣ ಕ್ಷೇತ್ರದ ಶಿವಸೇನೆ ಅಭ್ಯರ್ಥಿ ಅಶೋಕ ಬೇವಿನಕಟ್ಟಿ ಎಂಬಿಎ ಪದವಿ ಪಡೆದವರು.

ಇದೇ ಕ್ಷೇತ್ರದ  ಪಕ್ಷೇತರ ಅಭ್ಯರ್ಥಿ ಸುನೀಲಕುಮಾರ ಬ್ರಹ್ಮನಪಾಡ ಎಂಜಿನಿಯರಿಂಗ್‌ ಪದವೀಧರ. ವಿದೇಶದಲ್ಲಿ ಕೆಲಸ ಮಾಡುತ್ತಿದ್ದ ಅವರು, ಚುನಾವಣೆಯಲ್ಲಿ ಸ್ಪರ್ಧಿಸುವ ಸಲುವಾಗಿಯೇ ಸ್ವಕ್ಷೇತ್ರಕ್ಕೆ ಮರಳಿದ್ದಾರೆ.

ಗದಗ ಮತಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಕಾಂಗ್ರೆಸ್‌ನ ಹಿರಿಯ ಮುಖಂಡ ಎಚ್‌.ಕೆ ಪಾಟೀಲ ಅವರ ವಿದ್ಯಾರ್ಹತೆ ಬಿಎಸ್ಸಿ, ಎಲ್‌ಎಲ್‌ಬಿ. ನರಗುಂದ ಮತಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಬಿ.ಆರ್. ಯಾವಗಲ್ ಕೂಡ ಬಿಎಸ್ಸಿ, ಎಲ್ಎಲ್‌ಬಿ ಪದವೀಧರರು. ರೋಣ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಜಿ.ಎಸ್‌. ಪಾಟೀಲ ಅವರು ಬಿಎಸ್ಸಿ ಪದವೀಧರರು.
ಕಣದಲ್ಲಿರುವ 4 ಮಂದಿ ಬಿಜೆಪಿ ಅಭ್ಯರ್ಥಿಗಳಲ್ಲಿ ಪದವೀಧರರು ಯಾರೂ ಇಲ್ಲ. ಜೆಡಿಎಸ್‌ ಅಭ್ಯರ್ಥಿಗಳಲ್ಲಿ ಇಬ್ಬರು ಕಾನೂನು ಪದವೀಧರರು. 11 ಮಂದಿ ಪಕ್ಷೇತರರಲ್ಲಿ ಮೂವರು ಪದವೀಧರರು.

ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆ: ಗದಗ ಮತಕ್ಷೇತ್ರ: ಕಾಂಗ್ರೆಸ್: ಎಚ್.ಕೆ.ಪಾಟೀಲ (ಬಿಎಸ್ಸಿ, ಎಲ್‌ಎಲ್‌ಬಿ), ಬಿಜೆಪಿ: ಅನಿಲ ಮೆಣಸಿನಕಾಯಿ (ಪಿಯುಸಿ), ಬಿ.ಎಸ್.ಪಿ.: ಮೆಹಬೂಬಸಾಬ್ ಸೋಂಪುರ (ಎಸ್‌ಎಸ್‌ಎಲ್‌ಸಿ), ಐಎನ್‌ಸಿಪಿ: ಬಸನಗೌಡ ಪಾಟೀಲ (ಪಿಯುಸಿ), ರಾಣಿ ಚೆನ್ನಮ್ಮ ಪಾರ್ಟಿ: ಮಲ್ಲಿಕಾರ್ಜುನ ದೇಸಾಯಿ (9ನೇ ತರಗತಿ), ಎಂ.ಇ.ಪಿ: ಶಿರಾಜ್ ಅಹ್ಮದ್ ಬಳ್ಳಾರಿ (ಪಿಯುಸಿ), ಜನತಾ ದಳ ಸಂಯುಕ್ತ: ಶಿವರೆಡ್ಡಪ್ಪ ರೇಡ್ಡರ (7ನೇ ತರಗತಿ), ಪಕ್ಷೇತರ: ವಿಶ್ವನಾಥ ಖಾನಾಪುರ (ಬಿ.ಕಾಂ), ಪಕ್ಷೇತರ: ಅಬ್ದುಲಖಾದರಸಾಬ್ ಮುಸ್ತು ಸಾಬ್ ಮತ್ತು ಪಕ್ಷೇತರ: ಮಂಜುನಾಥ ಅಬ್ಬಿಗೇರಿ (ಎಸ್‌ಎಸ್‌ಎಲ್‌ಸಿ).

ರೋಣ ಮತಕ್ಷೇತ್ರ: ಬಿಜೆಪಿ– ಕಳಕಪ್ಪ ಬಂಡಿ (ಹಿಂದಿ ಪ್ರಚಾರ ಸಮಿತಿ ಪರೀಕ್ಷೆ ಉತ್ತೀರ್ಣ ), ಕಾಂಗ್ರೆಸ್–ಗುರುಪಾದಪ್ಪ ಎಸ್. ಪಾಟೀಲ (ಬಿಎಸ್ಸಿ), ಜೆಡಿಎಸ್‌–ರವೀಂದ್ರನಾಥ ದೊಡ್ಡಮೇಟಿ (ಎಂ.ಎ, ಎಲ್‌ಎಲ್‌ಬಿ), ಶಿವಸೇನೆ– ಅಶೋಕ ಬೇವಿನಕಟ್ಟಿ (ಬಿ.ಕಾಂ, ಎಂಬಿಎ), ಸಿಪಿಐ(ಎಂ)–ಎಂ.ಎಸ್.ಹಡಪದ (ಬಿಎ ಎಲ್‌ಎಲ್‌ಬಿ), ಜನತಾದಳ ಸಂಯುಕ್ತ–ಬಸವರಾಜ ಶಂಕ್ರಪ್ಪ ದೇಸಾಯಿ (ಎಸ್‌ಎಸ್‌ಎಲ್‌ಸಿ), ರಾಣಿ ಚನ್ನಮ್ಮ ಪಕ್ಷ–ನಾಗರತ್ನ ಚಂದ್ರಶೇಖರ ದೇಸಾಯಿ- (ಇಲ್ಲ), ಎಂ.ಇ.ಪಿ.–ಸೈಯದ್ ಕೊಪ್ಪಳ (ಬಿಇ– ಅಪೂರ್ಣ), ಪಕ್ಷೇತರ–ಫಕೀರಪ್ಪ ತೆಗ್ಗಿನಮನಿ (ಪಿಯುಸಿ), ಪಕ್ಷೇತರ– ಪ್ರಮೋದ ಡಿ ದೊಡ್ಡಮನಿ (ಪಿಯುಸಿ), ಪಕ್ಷೇತರ– ಜಿ.ಎ. ಲಕ್ಷ್ಮೀನಾರಾಯಣಗೌಡ (ಬಿ.ಕಾಂ), ಪಕ್ಷೇತರ– ಶರಣಪ್ಪ ಧರ್ಮಾಯತ (ಪಿಯುಸಿ), ಪಕ್ಷೇತರ–ಸುನೀಲಕುಮಾರ ಬ್ರಹ್ಮನಪಾಡ (ಬಿಇ).

ಶಿರಹಟ್ಟಿ ಮತಕ್ಷೇತ್ರ: ಕಾಂಗ್ರೆಸ್– ದೊಡ್ಡಮನಿ ರಾಮಕೃಷ್ಣ (7ನೇ ತರಗತಿ), ಬಿಜೆಪಿ– ರಾಮಪ್ಪ ಲಮಾಣಿ (4ನೇ ತರಗತಿ), ನ್ಯಾಶನಲ್ ಕಾಂಗ್ರೆಸ್ ಪಾರ್ಟಿ– ಗೀತಾ ಕೆ.ನಾಯಕ (ಎಸ್‌ಎಸ್ಎಲ್‌ಸಿ), ಬಿ.ಎಸ್.ಪಿ– ಚಂದ್ರಕಾಂತ ಕಾದ್ರೊಳ್ಳಿ (ಡಿಪ್ಲೊಮಾ), ಜನಹಿತ ಪಕ್ಷ– ಅರುಣಕುಮಾರ್ ತಿರ್ಲಾಪುರ (ಎಂ.ಎ, ಬಿ.ಇಡಿ), ಭಾರತೀಯ ಬಹುಜನ ಕ್ರಾಂತಿದಳ– ಕುಮಾರ ಲಮಾಣಿ (ಪಿಯುಸಿ), ಭಾರತೀಯ ರಿಪಬ್ಲಿಕ್ ಪಾರ್ಟಿ– ಎಲ್.ನಾರಾಯಣಸ್ವಾಮಿ (ಬಿ.ಕಾಂ), ಎಂ.ಇ.ಪಿ– ದೊಡ್ಡಮನಿ ಮಲ್ಲಿಕಾರ್ಜುನ (ಪಿಯುಸಿ), ರಾಣಿ ಚೆನ್ನಮ್ಮ ಪಕ್ಷ– ರಾಜವೆಂಕಟೇಶ ಕಾರಬಾರಿ (ಪಿಯುಸಿ), ಪಕ್ಷೇತರ–ಅಮೃತಾ ಆರ್. ಏಣಿ (6ನೇ ತರಗತಿ), ಪಕ್ಷೇತರ–ದುರುಗಪ್ಪ ಹರಿಜನ (ಇಲ್ಲ).

ನರಗುಂದ ಮತಕ್ಷೇತ್ರ: ಬಿಜೆಪಿ–ಸಿ.ಸಿ. ಪಾಟೀಲ (ಎಸ್‌ಎಸ್‌ಎಲ್‌ಸಿ), ಕಾಂಗ್ರೆಸ್–ಬಿ.ಆರ್.ಯಾವಗಲ್(ಬಿಎಸ್ ಸಿ ಎಲ್ಎಲ್‌ಬಿ), ಜೆಡಿಎಸ್‌– ಗಿರೀಶ ಪಾಟೀಲ (ಬಿಎ ಎಲ್‌ಎಲ್‌ಬಿ), ಶಿವಸೇನಾ– ದಾನು ಭೀಮನಗೌಡ ದಾನಪ್ಪಗೌಡ್ರ (ಬಿಎ ಬಿಪಿ.ಇಡಿ), ಜನಸಾಮಾನ್ಯರ ಪಾರ್ಟಿ– ಮುತ್ತು ಸುರಕೋಡ (ಎಸ್‌ಎಸ್‌ಎಲ್‌ಸಿ), ಭಾರತೀಯ ರಾಷ್ಟ್ರೀಯ ಮಹಿಳಾ ಸರ್ವೋದಯ ಕಾಂಗ್ರೆಸ್–ಸುರೇಶ ಮುಂಡರಗಿ (ಎಸ್‌ಎಸ್‌ಎಲ್‌ಸಿ), ಭಾರತೀಯ ಹೊಸ ಕಾಂಗ್ರೆಸ್ ಪಕ್ಷ– ಹಾಸೀಮ ಅಲಿ ಖಾಜಿ (ಪಿಯುಸಿ), ಪಕ್ಷೇತರ–ಶಕುಂತಲಾ ಕೊಂಡಬಂಗಿ (7ನೇ ತರಗತಿ).

ಹುಚ್ಚೇಶ್ವರ ಅಣ್ಣಿಗೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT