<p><strong>ಬೆಂಗಳೂರು: </strong>ಅಖಿಲ ಹವ್ಯಕ ಮಹಾಸಭೆ ಅಧ್ಯಕ್ಷರಾಗಿ ಸರ್ವಾನುಮತದಿಂದ5ನೇ ಬಾರಿ ಡಾ.ಗಿರಿಧರ ಕಜೆ ಆಯ್ಕೆಯಾಗಿದ್ದಾರೆ.</p>.<p>ಮಹಾಸಭೆ 76ನೇ ವರ್ಷದ ಸರ್ವಸದಸ್ಯರ ಸಭೆ ನಗರದ ಹವ್ಯಕ ಭವನದಲ್ಲಿ ಭಾನುವಾರ ನಡೆಯಿತು. ಉತ್ತರಕನ್ನಡ, ಬೆಂಗಳೂರು, ಶಿವಮೊಗ್ಗ,ಕೊಡಗು, ಕಾಸರಗೋಡು ವ್ಯಾಪ್ತಿಯ15 ನಿರ್ದೇಶಕ ಸ್ಥಾನ<br />ಗಳಿಗೆ ನಿಗದಿಯಾಗಿದ್ದಚುನಾವಣೆಯಲ್ಲಿ ಅವಿರೋಧವಾಗಿಆಯ್ಕೆ ಮಾಡಲಾಯಿತು. ಚುನಾವಣಾಧಿ<br />ಕಾರಿ ರಾಮಭಟ್ ನೂತನ ನಿರ್ದೇಶಕರ ಹೆಸರು ಘೋಷಿಸಿದರು.</p>.<p>ಮುಂದಿನ ಸಾಲಿಗೆ ಉಪಾಧ್ಯಕ್ಷರಾಗಿಶ್ರೀಧರ ಜೆ.ಭಟ್ ಕೆಕ್ಕಾರು, ಆರ್.ಎಂ.ಹೆಗಡೆ ಬಾಳೇಸರ ನೇಮಕರಾದರು. ಪ್ರಧಾನ ಕಾರ್ಯದರ್ಶಿಯಾಗಿ ಸಿ.ಎ.ವೇಣುವಿಘ್ನೇಶ ಸಂಪ,ಕಾರ್ಯದರ್ಶಿಗಳಾಗಿ ಪ್ರಶಾಂತಕುಮಾರ ಭಟ್ ಯಲ್ಲಾಪುರ, ಶ್ರೀಧರ ಭಟ್ ಸಾಲೇಕೊಪ್ಪ, ಕೋಶಾಧಿಕಾರಿಯಾಗಿ ಕೃಷ್ಣಮೂರ್ತಿ ಎಸ್.ಭಟ್ ಆಯ್ಕೆಯಾದರು.</p>.<p class="Subhead">ಗಾಯತ್ರಿ ಮಹೋತ್ಸವ: ‘ನಿರ್ದೇಶಕ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ನಡೆದಿರುವುದು ಸಮಾಜದಲ್ಲಿನ ಸಂಘಟನೆಯ ಶಕ್ತಿ ಹಾಗೂ ಒಗ್ಗಟ್ಟು ತೋರಿಸುತ್ತದೆ. ಸಮಾಜವನ್ನು ಒಡೆಯುವ ಪ್ರಯತ್ನಗಳ ಶಕ್ತಿ<br />ಕುಂದುವ ಜತೆಗೆ ಹೀನ ಮನಸ್ಕರ ಧ್ವನಿ ಅಡಗಿದೆ’ ಎಂದು ಮಹಾಸಭೆ ಅಧ್ಯಕ್ಷ ಡಾ.ಗಿರಿಧರ ಕಜೆ ಅವರು ಹರ್ಷ ವ್ಯಕ್ತಪಡಿಸಿದರು.</p>.<p>‘ಹವ್ಯಕ ಮಹಾಸಭೆಯಿಂದ ಗಾಯತ್ರಿ ಮಂತ್ರದ ಮಹತ್ವವನ್ನು ತಿಳಿಸುವ ಸಲುವಾಗಿ ಈ ವರ್ಷ<br />‘ಗಾಯತ್ರಿ ಮಹೋತ್ಸವ’ ಆಚರಿಸಲು ನಿರ್ಧರಿಸಲಾಗಿದೆ’ ಎಂದು ಅವರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಅಖಿಲ ಹವ್ಯಕ ಮಹಾಸಭೆ ಅಧ್ಯಕ್ಷರಾಗಿ ಸರ್ವಾನುಮತದಿಂದ5ನೇ ಬಾರಿ ಡಾ.ಗಿರಿಧರ ಕಜೆ ಆಯ್ಕೆಯಾಗಿದ್ದಾರೆ.</p>.<p>ಮಹಾಸಭೆ 76ನೇ ವರ್ಷದ ಸರ್ವಸದಸ್ಯರ ಸಭೆ ನಗರದ ಹವ್ಯಕ ಭವನದಲ್ಲಿ ಭಾನುವಾರ ನಡೆಯಿತು. ಉತ್ತರಕನ್ನಡ, ಬೆಂಗಳೂರು, ಶಿವಮೊಗ್ಗ,ಕೊಡಗು, ಕಾಸರಗೋಡು ವ್ಯಾಪ್ತಿಯ15 ನಿರ್ದೇಶಕ ಸ್ಥಾನ<br />ಗಳಿಗೆ ನಿಗದಿಯಾಗಿದ್ದಚುನಾವಣೆಯಲ್ಲಿ ಅವಿರೋಧವಾಗಿಆಯ್ಕೆ ಮಾಡಲಾಯಿತು. ಚುನಾವಣಾಧಿ<br />ಕಾರಿ ರಾಮಭಟ್ ನೂತನ ನಿರ್ದೇಶಕರ ಹೆಸರು ಘೋಷಿಸಿದರು.</p>.<p>ಮುಂದಿನ ಸಾಲಿಗೆ ಉಪಾಧ್ಯಕ್ಷರಾಗಿಶ್ರೀಧರ ಜೆ.ಭಟ್ ಕೆಕ್ಕಾರು, ಆರ್.ಎಂ.ಹೆಗಡೆ ಬಾಳೇಸರ ನೇಮಕರಾದರು. ಪ್ರಧಾನ ಕಾರ್ಯದರ್ಶಿಯಾಗಿ ಸಿ.ಎ.ವೇಣುವಿಘ್ನೇಶ ಸಂಪ,ಕಾರ್ಯದರ್ಶಿಗಳಾಗಿ ಪ್ರಶಾಂತಕುಮಾರ ಭಟ್ ಯಲ್ಲಾಪುರ, ಶ್ರೀಧರ ಭಟ್ ಸಾಲೇಕೊಪ್ಪ, ಕೋಶಾಧಿಕಾರಿಯಾಗಿ ಕೃಷ್ಣಮೂರ್ತಿ ಎಸ್.ಭಟ್ ಆಯ್ಕೆಯಾದರು.</p>.<p class="Subhead">ಗಾಯತ್ರಿ ಮಹೋತ್ಸವ: ‘ನಿರ್ದೇಶಕ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ನಡೆದಿರುವುದು ಸಮಾಜದಲ್ಲಿನ ಸಂಘಟನೆಯ ಶಕ್ತಿ ಹಾಗೂ ಒಗ್ಗಟ್ಟು ತೋರಿಸುತ್ತದೆ. ಸಮಾಜವನ್ನು ಒಡೆಯುವ ಪ್ರಯತ್ನಗಳ ಶಕ್ತಿ<br />ಕುಂದುವ ಜತೆಗೆ ಹೀನ ಮನಸ್ಕರ ಧ್ವನಿ ಅಡಗಿದೆ’ ಎಂದು ಮಹಾಸಭೆ ಅಧ್ಯಕ್ಷ ಡಾ.ಗಿರಿಧರ ಕಜೆ ಅವರು ಹರ್ಷ ವ್ಯಕ್ತಪಡಿಸಿದರು.</p>.<p>‘ಹವ್ಯಕ ಮಹಾಸಭೆಯಿಂದ ಗಾಯತ್ರಿ ಮಂತ್ರದ ಮಹತ್ವವನ್ನು ತಿಳಿಸುವ ಸಲುವಾಗಿ ಈ ವರ್ಷ<br />‘ಗಾಯತ್ರಿ ಮಹೋತ್ಸವ’ ಆಚರಿಸಲು ನಿರ್ಧರಿಸಲಾಗಿದೆ’ ಎಂದು ಅವರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>