ಕಲಾವಿದ ಶ್ರೀನಿವಾಸಮೂರ್ತಿ, ‘ರಾಜಕುಮಾರ್ ಅವರು ಸಹ ಕಲಾವಿದರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಭಾರತೀಯ ಚಿತ್ರರಂಗದಲ್ಲಿ ಎಷ್ಟೋ ನಟರು ಬಂದು ಹೋಗಿದ್ದಾರೆ. ಆದರೆ, ರಾಜಕುಮಾರ್ ಅವರಿಗೆ ಸಿಕ್ಕಿರುವ ಪಾತ್ರಗಳು ಬೇರೆ ಯಾರಿಗೂ ಸಿಕ್ಕಿಲ್ಲ. ಅವರು ಎಲ್ಲ ಕನ್ನಡಿಗರ ಹೃದಯದಲ್ಲಿ ನೆಲೆಸಿದ್ದಾರೆ. ಅವರ ಬಾಯಲ್ಲಿ ಎಂದಿಗೂ ಅಪಶಬ್ದ, ಅಪನುಡಿ ಬಂದಿಲ್ಲ’ ಎಂದು ಹೇಳಿದರು.