ಬಿಡಬ್ಲ್ಯುಎಸ್ಎಸ್ಬಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಶಶಿಕುಮಾರ್, ‘ಒಳ ಚರಂಡಿಗೆ ಹಾಕಲಾಗಿದ್ದ ಹಳೆಯ ಪೈಪ್ಗಳನ್ನು ಬದಲಾಯಿಸಿ, ಹೊಸದಾಗಿ ಕಾಮಗಾರಿ ಕೈಗೊಂಡಿದ್ದೇವೆ. ಮುನೇಶ್ವರ ದೇವಸ್ಥಾನದ ಬಳಿ ಬಂಡೆ ಸಿಕ್ಕಿದ್ದರಿಂದ, ಕಾಮಗಾರಿ ವಿಳಂಬವಾಗಿ, ಒಳಚರಂಡಿ ನೀರು ಸರಾಗವಾಗಿ ಹರಿಯದೆ ಗುಂಡಿಗಳಾಗಿವೆ. ಗುಂಡಿ ಬಿದ್ದಿರುವ ರಸ್ತೆಯನ್ನು ಸರಿಪಡಿಸಲಾಗುತ್ತಿದೆ’ ಎಂದು ತಿಳಿಸಿದರು.