ಬೆಂಗಳೂರು: ಡ್ರಗ್ಸ್ ಜಾಲದ ತನಿಖೆ ನಡೆಸುತ್ತಿರುವ ನಗರದ ಸಿಸಿಬಿ ಪೊಲೀಸರು, ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡ ಎಸ್.ಕಾರ್ತಿಕ್ ರಾಜುನನ್ನು ಮೂರನೇ ಬಾರಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ನಗರದಲ್ಲಿ ರೆಸಾರ್ಟ್ ಹೊಂದಿದ್ದ ಕಾರ್ತಿಕ್, ಅದನ್ನು ಆರೋಪಿಗಳಾದ ದೆಹಲಿಯ ವಿರೇನ್ ಖನ್ನಾ ಹಾಗೂ ವೈಭವ್ ಜೈನ್ಗೆ ಬಾಡಿಗೆಗೆ ಕೊಟ್ಟಿದ್ದ. ಅದೇ ರೆಸಾರ್ಟ್ನಲ್ಲಿ ಡ್ರಗ್ಸ್ ಪಾರ್ಟಿ ನಡೆದ ಮಾಹಿತಿ ಸಿಸಿಬಿಗೆ ಇದೆ.
ಇದರ ಆಧಾರದಲ್ಲಿ ಕಾರ್ತಿಕ್ನನ್ನು ಎರಡು ಬಾರಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದ ಸಿಸಿಬಿ, ಆತನನ್ನು ಬಿಟ್ಟು ಕಳುಹಿಸಿತ್ತು. ಇತ್ತೀಚೆಗೆ ಕೆಲ ಪುರಾವೆಗಳನ್ನು ಸಂಗ್ರಹಿಸಿರುವ ಸಿಸಿಬಿ, ಪುನಃ ಕಾರ್ತಿಕ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ