ಎಸ್.ಕೆ. ಸುಬ್ರಮಣ್ಯ ರೆಡ್ಡಿ ಎಂಬುವವರು ಬ್ಯಾಂಕ್ ಆಫ್ ಬರೋಡಾದ ಕೆಂಗೇರಿ ಶಾಖೆಯ ವ್ಯವಸ್ಥಾಪಕ ಟಿ.ಎಲ್. ಪ್ರವೀಣ್ ಕುಮಾರ್ ನೆರವಿನಲ್ಲಿ 57 ವ್ಯಕ್ತಿಗಳ ಹೆಸರಿನಲ್ಲಿ ನಕಲಿ ಆಭರಣ ಅಡವಿಟ್ಟು ಚಿನ್ನಾಭರಣ ಸಾಲ ಪಡೆದಿದ್ದರು. ಈ ಮೊತ್ತವನ್ನು ಸಿಂಡಿಕೇಟ್ ಬ್ಯಾಂಕ್ನಲ್ಲಿದ್ದ ತಮ್ಮ ಸಾಲ ತೀರಿಸಲು, ಹೊಸ ಆಸ್ತಿ ಖರೀದಿಗೆ ಬಳಸಿದ್ದರು ಎಂದು ಸಿಬಿಐ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿತ್ತು.