‘ಅಭ್ಯರ್ಥಿಯ ಬಯೊಮೆಟ್ರಿಕ್ ಪರಿಶೀಲನೆ ಇರುವುದರಿಂದ ಕೌನ್ಸೆಲಿಂಗ್ಗೆ ಅಭ್ಯರ್ಥಿಯ ಹಾಜರಾತಿ ಕಡ್ಡಾಯ. ಕೈಪಿಡಿಯಲ್ಲಿ ತಿಳಿಸಿದಂತೆ ಎಲ್ಲ ಮೂಲ ದಾಖಲೆಗಳನ್ನೂ ತಂದಿದ್ದೇ ಆದರೆ ಒಂದೇ ಗಂಟೆಯಲ್ಲಿ ಪ್ರಕ್ರಿಯೆಗಳೆಲ್ಲವೂ ಕೊನೆಗೊಳ್ಳುತ್ತವೆ. ತಡವಾಗಿ ಬಂದವರಿಗೆ ಅದೇ ದಿನದ ಕೊನೆಯಲ್ಲಿ ಕೌನ್ಸೆಲಿಂಗ್ ನಡೆಯುತ್ತದೆ. ಅಭ್ಯರ್ಥಿಯ ಭಾವಚಿತ್ರಸಹಿತ ಇರುವ ಕಾಲೇಜು ಪ್ರವೇಶ ಆದೇಶಪತ್ರವನ್ನು ಯಾವ ಕಾರಣಕ್ಕೂ ಕಳೆದುಕೊಳ್ಳಬಾರದು. ಕಳೆದಕೊಂಡರೆ, ಇನ್ನೊಂದು ಪ್ರತಿ ಕೊಡುವುದೇ ಇಲ್ಲ. ಅಂತಹವರ ಸೀಟು ಕಳೆದುಹೋಯಿತು ಎಂದೇ ಅರ್ಥ’ ಎಂದು ಶಾಂತಾರಾಂ ವಿವರಿಸಿದರು.