‘ಆರೋಪಿ ಲೋಕೇಶ್, ಆಟೊ ಚಾಲಕ. ಆತನಿಗೆ, ರಾಮನಗರ ನಿವಾಸಿ ಕೃಷ್ಣನ ಪರಿಚಯವಾಗಿತ್ತು. ದಂತಗಳನ್ನು ₹5 ಲಕ್ಷಕ್ಕೆ ಮಾರಾಟ ಮಾಡಿಕೊಡುವಂತೆ ಕೃಷ್ಣ ಕೋರಿದ್ದ. ಅದಕ್ಕೆ ಕಮಿಷನ್ ನೀಡುವುದಾಗಿಯೂ ತಿಳಿಸಿದ್ದ. ಆತನ ಮಾತಿಗೆ ಒಪ್ಪಿದ್ದ ಲೋಕೇಶ್, ಡಾಬಾವೊಂದರಲ್ಲಿ ಕೆಲಸ ಮಾಡುತ್ತಿದ್ದ ಮಂಜುನಾಥ್ ಜೊತೆ ಸೇರಿ ದಂತ ಮಾರಾಟ ಮಾಡಲು ನಗರಕ್ಕೆ ಬಂದಿದ್ದ’ ಎಂದೂ ತಿಳಿಸಿದರು.