‘ಹಾಸನ ತಾಲ್ಲೂಕಿನ ವೀರಾಪುರದ ಚಂದ್ರೇಗೌಡ (46), ಹಾವೇರಿಯ ಶಿಗ್ಗಾವಿ ತಾಲ್ಲೂಕಿನ ಹುಲಗೂರಿನ ಸೋಮಲಿಂಗಪ್ಪ ಕೊಡದ್ (41) ಹಾಗೂ ಪ್ರವೀಣ್ ಗುಳೇದ್ (24) ಬಂಧಿತರು. ಅವರಿಂದ 29 ಕೆ.ಜಿ ತೂಕದ ಎರಡು ದಂತಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಟಾಟಾ ಇಂಡಿಕಾ ಕಾರಿನಲ್ಲಿ ದಂತ ಇಟ್ಟುಕೊಂಡಿದ್ದ ಆರೋಪಿಗಳು, ಬನಶಂಕರಿ ಮೂರನೇ ಹಂತದಲ್ಲಿ ಸಂಚರಿಸುತ್ತಿದ್ದರು. ಮಾಹಿತಿ ಬರುತ್ತಿದ್ದಂತೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಯಿತು’ ಎಂದೂ ತಿಳಿಸಿದರು.
‘ವ್ಯಕ್ತಿಯೊಬ್ಬರಿಂದ ತಂದಿದ್ದ ದಂತಗಳನ್ನು ಆರೋಪಿಗಳು ನಗರದ ನಿವಾಸಿಯೊಬ್ಬರಿಗೆ ನೀಡಲು ಹೊರಟಿದ್ದರು. ನಿವಾಸಿ ಯಾರು ಎಂಬುದು ಗೊತ್ತಾಗಿಲ್ಲ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದೂ ಹೇಳಿದರು.