ಬೆಂಗಳೂರು ಪೂರ್ವ ತಾಲ್ಲೂಕಿನ ಬಿದರಹಳ್ಳಿ ಹೋಬಳಿಯ ಕಮ್ಮಸಂದ್ರದಲ್ಲಿ 2 ಗುಂಟೆ, ಗುಂಡುತೋಪು, ಕಿತ್ತಗನೂರು ಗ್ರಾಮದಲ್ಲಿ 20 ಗುಂಟೆ ಗೋಮಾಳ, ನಾಡಗೌಡಹಳ್ಳಿ 27 ಗುಂಟೆ ಗುಂಡುತೋಪು, ನಿಂಬೇಕಾಯಿಪುರದಲ್ಲಿ 27 ಗುಂಟೆ ಕೆರೆ ಜಾಗ, ಗೊರವಿಗೆರೆಯಲ್ಲಿ 1 ಎಕರೆ 18 ಗುಂಟೆ ಸರ್ಕಾರಿ ಜಾಗ, ಶೀಗೆಹಳ್ಳಿಯಲ್ಲಿ 27 ಗುಂಟೆ ಗುಂಡುತೋಪು ಹಾಗೂ ವರ್ತೂರು ಹೋಬಳಿಯ ಕೊಡತಿ ಗ್ರಾಮದಲ್ಲಿ 5 ಗುಂಟೆ ಕೆರೆ ಜಾಗ ತೆರವುಗೊಳಿಸಲಾಗಿದೆ. ಪೂರ್ವ ತಾಲ್ಲೂಕಿನಲ್ಲಿ ಒಟ್ಟು ₹7.77 ಕೋಟಿ ಮೌಲ್ಯ 4 ಎಕರೆ 6 ಗುಂಟೆ ಜಮೀನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ವಿವರಿಸಿದ್ದಾರೆ.