‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಮಾಧ್ಯಮ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಿತು.ಪರಿಸರ ಸಂರಕ್ಷಣೆಗೆ ಶ್ರಮಿಸುತ್ತಿರುವ ನಗರದ ತೆರೆಮರೆಯ ಸಾಧಕರಾದ ಹರ್ಷಿತ್ ರೆಡ್ಡಿ, ರಕ್ಷಿತ್ ಪವಾರ್, ಎಡ್ವಿನ್ ಜೋಸೆಫ್ ಹಾಗೂ ನಾಗರಾಜ್ ಅವರನ್ನು ಗೌರವಿಸಿ, ಅವರ ಬಗೆಗಿನ 30 ನಿಮಿಷಗಳ ಸಾಕ್ಷ್ಯಚಿತ್ರ ಪ್ರದರ್ಶನ ಮಾಡಲಾಯಿತು. ಇವರು ಪ್ರಾಣಿ–ಪಕ್ಷಿಗಳ ಸಂರಕ್ಷಣೆ, ಪ್ಲಾಸ್ಟಿಕ್ ತ್ಯಾಜ್ಯಗಳ ಮರುಬಳಕೆ ಸೇರಿ ವಿವಿಧ ಕಾರ್ಯವನ್ನು ಕೈಗೊಂಡಿದ್ದಾರೆ.