‘ತಲಾಖ್ ಪ್ರಶ್ನಿಸಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದೆ. ನನ್ನ ಪರ ತೀರ್ಪು ಬಂದಿತ್ತು. ಇಷ್ಟಾದರೂ ಪತಿಯ ಕಿರುಕುಳ ತಪ್ಪಿಲ್ಲ. ಕೆ.ಆರ್.ಪುರ ಠಾಣೆಗೆ ದೂರು ನೀಡಿದರೆ, ರಕ್ಷಣೆ ನೀಡಲು ಇನ್ಸ್ಪೆಕ್ಟರ್ ನಂದೀಶ್ ಹಣ ಕೇಳಿದರು. ಜೊತೆಗೆ ಠಾಣೆಯ ಪಿಎಸ್ಐ ಅನಿತಾ, ‘ನೀನು ಮಾಜಿ ಮಾತ್ರ. ಹೆಚ್ಚು ಮಾತನಾಡಬೇಡ’ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಮದ್ಯ ಕುಡಿದು ಮನೆಗೆ ಬಂದಿದ್ದ ಕೆಲ ಪೊಲೀಸರು, ಸಂಬಂಧಿಕರ ಮೇಲೆ ಹಲ್ಲೆ ಸಹ ಮಾಡಿದ್ದಾರೆ’ ಎಂದು ಶಹತಾಜ್ ತಿಳಿಸಿದ್ದಾರೆ.