ಎರಡು ದಿನಗಳ ಹಿಂದಷ್ಟೇ ಮರುಮೌಲ್ಯಮಾಪನದ ಫಲಿತಾಂಶ ಬಂದಿದ್ದು, ಅವರ ದಾಖಲಾತಿಗಾಗಿ ಪಿಯು ಇಲಾಖೆ ದಿನಾಂಕವನ್ನು ವಿಸ್ತರಿಸಿದೆ. ಜೊತೆಗೆ ಈ ದಿನಾಂಕಗಳಲ್ಲಿ ದಾಖಲಾಗುವ ವಿದ್ಯಾರ್ಥಿಗಳಿಂದ ಶೇ 75ರಷ್ಟು ಹಾಜರಾತಿಯನ್ನು ಪಡೆಯುವ ಬಗ್ಗೆ ಅವರಿಂದ ಕಡ್ಡಾಯವಾಗಿ ಮುಚ್ಚಳಿಕೆಯನ್ನು ಪಡೆದು ದಾಖಲಾತಿ ನೀಡಬೇಕು ಎಂದು ಇಲಾಖೆ ಸುತ್ತೋಲೆಯಲ್ಲಿ ತಿಳಿಸಿದೆ.