ಬೆಂಗಳೂರು: ಗಂಗಾನಗರ ಮುಖ್ಯರಸ್ತೆಯ ತರಕಾರಿ ಮಾರಾಟ ಮಳಿಗೆಗೆ ಮಾರಕಾಸ್ತ್ರ ಸಮೇತ ನುಗ್ಗಿ ಸುಲಿಗೆ ಮಾಡಲು ಯತ್ನಿಸಿದ್ದ ಆರೋಪಿ ತಬ್ರೇಜ್ ಎಂಬಾತನನ್ನು ಆರ್.ಟಿ.ನಗರ ಪೊಲೀಸರು ಬಂಧಿಸಿದ್ದಾರೆ.
‘ಕೆ.ಜಿ.ಹಳ್ಳಿ ನಿವಾಸಿ ತಬ್ರೇಜ್, ಅಪರಾಧ ಪ್ರಕರಣವೊಂದರಲ್ಲಿ ಜೈಲಿಗೆ ಹೋಗಿದ್ದ. ಜಾಮೀನು ಪಡೆದು ಮೂರು ದಿನಗಳ ಹಿಂದೆಯಷ್ಟೇ ಜೈಲಿನಿಂದ ಹೊರಗೆ ಬಂದಿದ್ದ. ಬುಧವಾರ ಬೆಳಿಗ್ಗೆ ಸುಲಿಗೆಗೆ ಯತ್ನಿಸಿದ್ದ ಆತನನ್ನು ಜನರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ’ ಎಂದು ಆರ್.ಟಿ.ನಗರ ಠಾಣೆ ಮೂಲಗಳು ಹೇಳಿವೆ.
‘ಜೈಲಿಗೆ ಹೋಗಿ ಬಂದಿರುವು ದಾಗಿ ಹೇಳಿಕೊಂಡು ಮಚ್ಚು ಹಿಡಿದು ಸುತ್ತಾಡುತ್ತಿದ್ದ ಆರೋಪಿ, ಜನರನ್ನು ಬೆದರಿಸುತ್ತಿದ್ದ. ಅಂಗಡಿಗಳಲ್ಲಿ ನುಗ್ಗಿಹಣ ಕಿತ್ತುಕೊಳ್ಳುತ್ತಿದ್ದ. ಗಂಗಾ ನಗರದ ಮುಖ್ಯರಸ್ತೆಯಲ್ಲಿರುವ ಶಿವರಾಜು ಎಂಬುವರ ತರಕಾರಿ ಮಾರಾಟ ಮಳಿಗೆಗೂ ಬುಧವಾರ ಬೆಳಿಗ್ಗೆ ನುಗ್ಗಿದ್ದ.’
‘ಶಿವರಾಜು ಮೇಲೆಹಲ್ಲೆ ನಡೆಸಿದ್ದ ಆರೋಪಿ, ಮಾರ ಕಾಸ್ತ್ರದಿಂದ ಹೊಡೆಯಲು ಮುಂದಾಗಿದ್ದ. ಸಾರ್ವಜನಿಕರು, ಆರೋಪಿಯನ್ನು ಹಿಡಿದುಕೊಂಡಿದ್ದರು' ಎಂದು ಮೂಲಗಳು ತಿಳಿಸಿವೆ.