ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಲಿಗೆಗೆ ಯತ್ನ: ಆರೋಪಿ ಬಂಧನ

Last Updated 18 ಆಗಸ್ಟ್ 2022, 22:09 IST
ಅಕ್ಷರ ಗಾತ್ರ

ಬೆಂಗಳೂರು: ಗಂಗಾನಗರ ಮುಖ್ಯರಸ್ತೆಯ ತರಕಾರಿ ಮಾರಾಟ ಮಳಿಗೆಗೆ ಮಾರಕಾಸ್ತ್ರ ಸಮೇತ ನುಗ್ಗಿ ಸುಲಿಗೆ ಮಾಡಲು ಯತ್ನಿಸಿದ್ದ ಆರೋಪಿ ತಬ್ರೇಜ್ ಎಂಬಾತನನ್ನು ಆರ್‌.ಟಿ.ನಗರ ಪೊಲೀಸರು ಬಂಧಿಸಿದ್ದಾರೆ.

‘ಕೆ.ಜಿ.ಹಳ್ಳಿ ನಿವಾಸಿ ತಬ್ರೇಜ್, ಅಪರಾಧ ಪ್ರಕರಣವೊಂದರಲ್ಲಿ ಜೈಲಿಗೆ ಹೋಗಿದ್ದ. ಜಾಮೀನು ಪಡೆದು ಮೂರು ದಿನಗಳ ಹಿಂದೆಯಷ್ಟೇ ಜೈಲಿನಿಂದ ಹೊರಗೆ ಬಂದಿದ್ದ. ಬುಧವಾರ ಬೆಳಿಗ್ಗೆ ಸುಲಿಗೆಗೆ ಯತ್ನಿಸಿದ್ದ ಆತನನ್ನು ಜನರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ’ ಎಂದು ಆರ್‌.ಟಿ.ನಗರ ಠಾಣೆ ಮೂಲಗಳು ಹೇಳಿವೆ.

‘ಜೈಲಿಗೆ ಹೋಗಿ ಬಂದಿರುವು ದಾಗಿ ಹೇಳಿಕೊಂಡು ಮಚ್ಚು ಹಿಡಿದು ಸುತ್ತಾಡುತ್ತಿದ್ದ ಆರೋಪಿ, ಜನರನ್ನು ಬೆದರಿಸುತ್ತಿದ್ದ. ಅಂಗಡಿಗಳಲ್ಲಿ ನುಗ್ಗಿಹಣ ಕಿತ್ತುಕೊಳ್ಳುತ್ತಿದ್ದ. ಗಂಗಾ ನಗರದ ಮುಖ್ಯರಸ್ತೆಯಲ್ಲಿರುವ ಶಿವರಾಜು ಎಂಬುವರ ತರಕಾರಿ ಮಾರಾಟ ಮಳಿಗೆಗೂ ಬುಧವಾರ ಬೆಳಿಗ್ಗೆ ನುಗ್ಗಿದ್ದ.’

‘ಶಿವರಾಜು ಮೇಲೆಹಲ್ಲೆ ನಡೆಸಿದ್ದ ಆರೋಪಿ, ಮಾರ ಕಾಸ್ತ್ರದಿಂದ ಹೊಡೆಯಲು ಮುಂದಾಗಿದ್ದ. ಸಾರ್ವಜನಿಕರು, ಆರೋಪಿಯನ್ನು ಹಿಡಿದುಕೊಂಡಿದ್ದರು' ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT