‘ಖಾಸಗಿ ಕಂಪನಿ ಉದ್ಯೋಗಿ ಆಗಿರುವ ದೂರುದಾರ ಅಂಬರೀಷ್ ಸಂಜೆ ಉದ್ಯಾನದಲ್ಲಿ ಕುಳಿತಿದ್ದರು. ಸ್ಥಳಕ್ಕೆ ಬಂದಿದ್ದ ದುಷ್ಕರ್ಮಿಗಳು, ತಾವು ಕ್ರೈಂ ಪೊಲೀಸರೆಂದು ಹೇಳಿಕೊಂಡಿದ್ದರು. ‘ನೀನು ದರೋಡೆ ಗ್ಯಾಂಗ್ ಸದಸ್ಯನಂತೆ ಕಾಣುತ್ತಿದ್ದಿಯಾ. ನಮಗೆ ₹ 30,000 ಕೊಡು. ಇಲ್ಲದಿದ್ದರೆ, ನಿನ್ನ ವಿರುದ್ಧ ಪ್ರಕರಣ ದಾಖಲಿಸುತ್ತೇವೆ’ ಎಂಬುದಾಗಿ ಆರೋಪಿಗಳು ಬೆದರಿಸಿದ್ದರು’ ಎಂದು ತಿಳಿಸಿದರು.