‘ಆರೋಪಿ, ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮ, ಭೋವಿ ಅಭಿವೃದ್ಧಿ ನಿಗಮಗಳ ವ್ಯವಸ್ಥಾಪಕರಿಗೆ ಸಚಿವರ ಶಿಫಾರಸು ಇರುವಂತೆ ಲೆಟರ್ಹೆಡ್ ಸೃಷ್ಟಿಸಿದ್ದ. ಸಚಿವರ ನಕಲಿ ಸಹಿ ಮಾಡಿದ್ದ. ಸಮುದಾಯದ 20 ಮಂದಿಗೆ ಸಾಲ ಸೌಲಭ್ಯ ನೀಡುವಂತೆಯೂ ಪತ್ರದಲ್ಲಿ ಉಲ್ಲೇಖಿಸಿ ನಿಗಮಗಳ ವ್ಯವಸ್ಥಾಪಕರಿಗೆ ಇದೇ ನಕಲಿ ಪತ್ರವನ್ನು ಸಲ್ಲಿಸಿದ್ದ. ಇದೇ ಲೆಟರ್ಹೆಡ್ನಲ್ಲಿ ಪತ್ರವನ್ನು ಸಚಿವರ ಕಚೇರಿಗೂ ತಲುಪಿಸಿದ್ದ. ಆ ಪತ್ರವನ್ನು ನೋಡಿ ಅನುಮಾನಗೊಂಡ ರಾಜೇಂದ್ರ ಅವರು ಪರಿಶೀಲನೆ ನಡೆಸಿದಾಗ ನಕಲಿ ಎಂಬುದು ಗೊತ್ತಾಗಿದೆ. ತಕ್ಷಣ ದೂರು ನೀಡಿದ್ದರು’ ಎಂದು ಪೊಲೀಸರು ಹೇಳಿದರು.