ಸಮೀಕ್ಷೆಯ ಯೋಜನಾ ನಿರ್ದೇಶಕ ಡಾ.ಸಿ.ಎಂ. ಲಕ್ಷ್ಮಣ, ‘ಇದೇ ಮೊದಲ ಬಾರಿಗೆ ಕರ್ನಾಟಕವನ್ನು ಉತ್ತರ ಮತ್ತು ದಕ್ಷಿಣವೆಂದು ವಿಂಗಡಿಸಿ, ಸಮೀಕ್ಷೆ ನಡೆಸಲಾಗುತ್ತಿದೆ. ಉತ್ತರ ಭಾಗವನ್ನು ಗೋವಾಕ್ಕೆ ಸೇರ್ಪಡೆ ಮಾಡಲಾಗಿದೆ. ಸಮೀಕ್ಷೆಯಲ್ಲಿ ನೀರು, ನೈರ್ಮಲ್ಯ, ಅಡುಗೆ ಎಣ್ಣೆ, ಕೈತೊಳೆಯುವ ವ್ಯವಸ್ಥೆ ಸೇರಿ ಕುಟುಂಬಕ್ಕೆ ಸಂಬಂಧಿಸಿದ ವಿವಿಧ ಮಾಹಿತಿ ಹಾಗೂ ವೈಯಕ್ತಿಕ ಆರೋಗ್ಯ ಮಾಹಿತಿ ಸಂಗ್ರಹಿಸಲಾಗುತ್ತದೆ’ ಎಂದು ತಿಳಿಸಿದರು.