ವಿಡಿಯೊ ವಿವರ:‘ವೈದಿಕ ಮತ್ತು ವೀರಶೈವರಿಗೆ ಕೊನೆ ಎಚ್ಚರಿಕೆ ನೀಡುತ್ತಿದ್ದೇನೆ. ನಿಮ್ಮ ನಾಟಕ ಅತಿಯಾಯಿತು. ಶಾಮನೂರು ಶಿವಶಂಕರಪ್ಪ ಅವರೇ ನೀವು ಮಹಾರಾಷ್ಟ್ರಕ್ಕೆ ಬಂದು ಆ ರೀತಿ ಮಾತಾಡಿ ನೋಡೋಣ. ಮಹಾರಾಷ್ಟ್ರದ ಲಿಂಗಾಯತ ಮತ್ತು ಮರಾಠಿ ಲಿಂಗಾಯತ ಸಮುದಾಯ ನಿಮಗೆ ಸರಿಯಾದ ಉತ್ತರ ನೀಡುತ್ತದೆ. ಲಿಂಗಾಯತರು ಎಂದರೆ ಏನು? ಬಸವಣ್ಣನ ಭಕ್ತರು ಎಂದರೆ ಏನು ? ಎಂದು ತೋರಿಸುತ್ತಾರೆ. ಕರ್ನಾಟಕದ ಲಿಂಗಾಯತ ಸಹೋದರರೇ ನೀವೆಲ್ಲಾ ಇನ್ನೂ ಬಾಯಿ ಮುಚ್ಚಿಕೊಂಡಿದ್ದರೆ ನಿಮಗೆ ಲಿಂಗಾಯತರು ಎಂದು ಕರೆಸಿಕೊಳ್ಳುವ ಯೋಗ್ಯತೆಯೇ ಇರುವುದಿಲ್ಲ’ ಎಂದು ಆರೋಪಿ ವಿಡಿಯೊದಲ್ಲಿ ಹೇಳಿದ್ದಾನೆ’ ಎಂದು ಪೊಲೀಸರು ಮಾಹಿತಿ ನೀಡಿದರು.