ಮರು ದಿನ ಸಂತ್ರಸ್ತೆಗೆ ಕರೆ ಮಾಡಿದ್ದ ಉದ್ಯಮಿ ಭೇಟಿಯಾಗುವಂತೆ ಕೋರಿದ್ದಾನೆ. ಆಕೆ ನಿರಾಕರಿಸಿದ್ದರು. ಅದಾದ ಮೇಲೆ ಸಲುಗೆ ಬೆಳೆಸಿಕೊಂಡು ಪ್ರತಿನಿತ್ಯ ಕರೆ ಮಾಡುವುದು, ಚಾಟಿಂಗ್, ವಿಡಿಯೊ ಕಾಲ್ನಲ್ಲಿ ಮಾತನಾಡುತ್ತಿದ್ದರು. ಉದ್ಯಮಿಯ ವರ್ತನೆಯಲ್ಲಿ ಬದಲಾವಣೆಯಾದ ಪರಿಣಾಮ ಸಂತ್ರಸ್ತೆ ಸ್ನೇಹ ಕಡಿದುಕೊಳ್ಳಲು ಮುಂದಾಗಿದ್ದರು. ಆದರೂ ಆರೋಪಿ ಗಣೇಶ್, ತನ್ನ ಸಂಬಂಧ ಮುಂದುವರಿಸುವಂತೆ ಒತ್ತಡ ಹೇರುತ್ತಿದ್ದನೆಂದು ಸಂತ್ರಸ್ತೆ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದರು.