ಅಗೆದಿರುವ ಕಲ್ಲು, ಮಣ್ಣು, ಮರದ ಕೊಂಬೆಗಳು ಮತ್ತು ಸಿಮೆಂಟ್ ಕೊಳವೆಗಳನ್ನು ರಸ್ತೆ ಪಕ್ಕದಲ್ಲೇ ರಾಶಿ ಹಾಕಲಾಗಿದೆ. ಈ ಕಸದ ರಾಶಿ ದಾಟಿಕೊಂಡು ಹೋಗುವಾಗ ಜನ ಹೈರಾಣಾಗುತ್ತಿದ್ದಾರೆ. ಒಡೆದ ಕಾಂಕ್ರೀಟ್ ಕೊಳವೆಗಳಿಂದ ಹೊರಚಾಚಿರುವ ಕಬ್ಬಿಣದ ಸರಳುಗಳು ತಾಗಿ ಪಾದಚಾರಿಗಳು ಗಾಯಗೊಳ್ಳುವ ಮತ್ತು ಎಡವಿ ಬೀಳುವಂತಹ ಅಪಾಯಗಳೂ ಇವೆ.ಇಲ್ಲಿ ನಿತ್ಯ ಓಡಾಡುವ ಸಾವಿರಾರು ಪಾದಚಾರಿಗಳು ಈ ಅಡೆತಡೆಗಳ ನಡುವೆ ನಡೆಯಲೂ ಆಗದೇ, ತಪ್ಪಿಸಿಕೊಳ್ಳಲೂ ಆಗದೇ ಇಕ್ಕಟ್ಟಿನ ಪರಿಸ್ಥಿತಿ ಎದುರಿಸುತ್ತಿದ್ದಾರೆ.