ರಸ್ತೆ, ಪಾದಚಾರಿ ಮಾರ್ಗಗಳನ್ನು ನಿರ್ವಹಣೆ ಮಾಡಲು ‘ಸಮರ್ಪಿತ’ ತಂಡ ರಚಿಸಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಸೂಚಿಸಿದರು. ಬಿಬಿಎಂಪಿಯಲ್ಲಿನ ವಿವಿಧ ಇಲಾಖೆಗಳಾದ ರಸ್ತೆ ಮೂಲಸೌಕರ್ಯ ವಿಭಾಗ ಸಂಚಾರ ಎಂಜಿನಿಯರಿಂಗ್ ಘಟಕ ಓಎಫ್ಸಿ ಮತ್ತು ವಿದ್ಯುತ್ ವಿಭಾಗಗಳು ಒಟ್ಟಾರೆ ‘ಸಮಗ್ರ ಸಂಚಾರಿ ಇಲಾಖೆ’ಯಾಗಿ ಏಕೀಕರಿಸಬೇಕು. ಈ ವಿಭಾಗಕ್ಕೆ ಸ್ವಂತ ಸಾರಿಗೆ ಯೋಜಕರು ಮತ್ತು ನಗರ ವಿನ್ಯಾಸಕಾರರನ್ನು ನೇಮಿಸಿಕೊಂಡು ರಸ್ತೆ ಮತ್ತು ಪಾದಚಾರಿ ಮಾರ್ಗಗಳ ಅಭಿವೃದ್ಧಿ ನಿರ್ವಹಣೆಗೆ ‘ಸಮರ್ಪಿತ ತಂಡ’ ರಚಿಸಬೇಕು ಎಂದರು. ವಸತಿ ಪ್ರದೇಶಗಳಲ್ಲಿ ಕನಿಷ್ಠ 1.8 ಮೀಟರ್ ಮತ್ತು ವಾಣಿಜ್ಯ ಪ್ರದೇಶಗಳಲ್ಲಿ 2.5 ಮೀಟರ್ ವಿಸ್ತೀರ್ಣದ ಪಾದಚಾರಿ ಮಾರ್ಗ ಇರುವಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.