ಈ ಸಂದರ್ಭದಲ್ಲಿ ಅಲ್ಲೇ ಇದ್ದ ಖಾಜಾ ಬಂದೆ ನವಾಜ್, ‘ತಾನು ಸಿಸಿಬಿ ಹಿರಿಯ ಅಧಿಕಾರಿ ಎಂದು ಶ್ರೀನಿವಾಸ್ಗೆ ಪರಿಚಯಿಸಿಕೊಂಡು, ‘ನಿಮ್ಮ ಸಹೋದ ರರನ್ನು ಬಿಟ್ಟು ಕಳುಹಿಸುತ್ತೇವೆ. ಅದಕ್ಕೆ ಹಣ ಕೊಡಬೇಕು ಎಂದು ಹೇಳಿ ₹ 1.10 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾನೆ. ಕೆಲವೇ ಕ್ಷಣಗಳಲ್ಲಿ ಶ್ರೀನಿವಾಸ್ ಹಣ ಹೊಂದಿಸಿ ಆರೋಪಿಗೆ ನೀಡಿದ್ದಾರೆ. ಬಳಿಕ, ‘ನೀವು ಮನೆಗೆ ಹೋಗಿ. ಅಷ್ಟರಲ್ಲಿ ನಿಮ್ಮ ಸಹೋದರ ಕೂಡಾ ಮನೆಗೆ ಬಂದಿರುತ್ತಾರೆ’ ಎಂದು ನಂಬಿಸಿ ಕಳುಹಿಸಿದ್ದಾನೆ ಎಂದು ಪೊಲೀಸರು ಹೇಳಿದರು.