‘ಆರೋಪಿ ಕೆ.ಎಂ.ಸುರೇಶ್ ಅವರು ಟೆಂಡರ್ ಅಂಗೀಕಾರ ಪ್ರಾಧಿಕಾರದ ಅಧಿಕಾರಿಯಾಗಿದ್ದರು. ಇನ್ನೊಬ್ಬ ಆರೋಪಿ ಪ್ರಕಾಶ್ ಎಂ. ಹರಗಾಪುರೆ ಅವರು ಟೆಂಡರ್ ಪರಿಶೀಲನಾ ಪ್ರಾಧಿಕಾರದಲ್ಲಿದ್ದರು. ಮತ್ತೊಬ್ಬ ಆರೋಪಿ ಸೀತಾರಾಮ್, ಟೆಂಡರ್ ತಾಂತ್ರಿಕ ಪರಿಶೀಲನಾ ಸಮಿತಿ ಸದಸ್ಯರಾಗಿದ್ದರು. ಈ ಮೂವರು, ಬಿಡ್ದಾರರ ದಾಖಲೆಗಳ ಪರಿಶೀಲನೆಯನ್ನು ಸೂಕ್ತವಾಗಿ ನಡೆಸದೇ ಅಂಗೀಕರಿಸಿ ಅಕ್ರಮಕ್ಕೆ ಸಹಕಾರ ನೀಡಿರುವ ಆರೋಪವಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.