<p><strong>ಬೆಂಗಳೂರು:</strong> ಬೀದರ್ನಿಂದ ನಗರಕ್ಕೆ ಕಾರಿನಲ್ಲಿ ಸಾಗಿಸುತ್ತಿದ್ದ ₹ 76 ಲಕ್ಷ ಮೌಲ್ಯದ 127 ಕೆ.ಜಿ ಗಾಂಜಾವನ್ನು ಜೆ.ಪಿ.ನಗರ ಪೊಲೀಸರು ಜಪ್ತಿ ಮಾಡಿದ್ದು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.</p>.<p>‘ಸರ್ಜಾಪುರ ಬಳಿಯ ಬಿಲ್ಲಾಪುರ ಗ್ರಾಮದ ಅಸ್ಗರ್ ಖಾನ್ (24), ತೆಲಂಗಾಣದ ಜಿ. ಕಿರಣ್ (22) ಹಾಗೂ ಪಿ. ಮಹಿಪಾಲ್ (22) ಬಂಧಿತರು. ಗಾಂಜಾ ಜೊತೆಯಲ್ಲಿ 2 ಮೊಬೈಲ್ ಹಾಗೂ ಕಾರನ್ನೂ ಜಪ್ತಿ ಮಾಡಲಾಗಿದೆ’ ಎಂದು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ತಿಳಿಸಿದರು.</p>.<p>‘ಬ್ಯಾಟರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಅಸ್ಗರ್, ಮಾದಕ ವ್ಯಸನಿ. ಆರೋಪಿ ಕಿರಣ್, ತನ್ನೂರಿನ ಐಟಿಐ ಕಾಲೇಜೊಂದರಲ್ಲಿ ಅತಿಥಿ ಶಿಕ್ಷಕ. ಮಹಿಪಾಲ್ ಬಿ.ಎ ಪದವೀಧರ.’</p>.<p>‘ಲಾಕ್ಡೌನ್ನಿಂದಾಗಿ ಮೂವರ ಕೆಲಸ ಹೋಗಿತ್ತು. ಕುಟುಂಬ ನಿರ್ವಹಣೆಯೂ ಕಷ್ಟವಾಗಿತ್ತು. ಅಕ್ರಮವಾಗಿ ಹಣ ಸಂಪಾದಿಸಲು ಮುಂದಾಗಿದ್ದ ಅವರು ಗಾಂಜಾ ಮಾರಾಟ ಮಾಡಲಾರಂಭಿಸಿದ್ದ. ಬೀದರ್ನಲ್ಲಿ ಖರೀದಿಸುತ್ತಿದ್ದ ಗಾಂಜಾವನ್ನು ಕಾರಿನಲ್ಲಿ ನಗರಕ್ಕೆ ತಂದು ಪರಿಚಯಸ್ಥ ಗ್ರಾಹಕರಿಗೆ ಮಾರುತ್ತಿದ್ದರು’ ಎಂದೂ ಹೇಳಿದರು.</p>.<p>‘ಕಿರಣ್ ಹಾಗೂ ಮಹಿಪಾಲ್ ಇಬ್ಬರೂ ಸಂಬಂಧಿಕರು. ಕೆಲ ತಿಂಗಳ ಹಿಂದಷ್ಟೇ ಅವರಿಗೆ ಅಸ್ಗರ್ ಖಾನ್ ಪರಿಚಯ ಆಗಿತ್ತು. ನಂತರ ಮೂವರು ಸೇರಿಕೊಂಡು ಬಾಡಿಗೆ ಕಾರು ಪಡೆದು ಬೀದರ್ಗೆ ಹೋಗಿ ಗಾಂಜಾ ತರುತ್ತಿದ್ದರು. ಮಾರ್ಗಮಧ್ಯೆ ಉಪ ಪೆಡ್ಲರ್ಗಳಿಗೆ ಗಾಂಜಾ ಮಾರುತ್ತಿದ್ದರು’ ಎಂದೂ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಬೀದರ್ನಿಂದ ನಗರಕ್ಕೆ ಕಾರಿನಲ್ಲಿ ಸಾಗಿಸುತ್ತಿದ್ದ ₹ 76 ಲಕ್ಷ ಮೌಲ್ಯದ 127 ಕೆ.ಜಿ ಗಾಂಜಾವನ್ನು ಜೆ.ಪಿ.ನಗರ ಪೊಲೀಸರು ಜಪ್ತಿ ಮಾಡಿದ್ದು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.</p>.<p>‘ಸರ್ಜಾಪುರ ಬಳಿಯ ಬಿಲ್ಲಾಪುರ ಗ್ರಾಮದ ಅಸ್ಗರ್ ಖಾನ್ (24), ತೆಲಂಗಾಣದ ಜಿ. ಕಿರಣ್ (22) ಹಾಗೂ ಪಿ. ಮಹಿಪಾಲ್ (22) ಬಂಧಿತರು. ಗಾಂಜಾ ಜೊತೆಯಲ್ಲಿ 2 ಮೊಬೈಲ್ ಹಾಗೂ ಕಾರನ್ನೂ ಜಪ್ತಿ ಮಾಡಲಾಗಿದೆ’ ಎಂದು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ತಿಳಿಸಿದರು.</p>.<p>‘ಬ್ಯಾಟರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಅಸ್ಗರ್, ಮಾದಕ ವ್ಯಸನಿ. ಆರೋಪಿ ಕಿರಣ್, ತನ್ನೂರಿನ ಐಟಿಐ ಕಾಲೇಜೊಂದರಲ್ಲಿ ಅತಿಥಿ ಶಿಕ್ಷಕ. ಮಹಿಪಾಲ್ ಬಿ.ಎ ಪದವೀಧರ.’</p>.<p>‘ಲಾಕ್ಡೌನ್ನಿಂದಾಗಿ ಮೂವರ ಕೆಲಸ ಹೋಗಿತ್ತು. ಕುಟುಂಬ ನಿರ್ವಹಣೆಯೂ ಕಷ್ಟವಾಗಿತ್ತು. ಅಕ್ರಮವಾಗಿ ಹಣ ಸಂಪಾದಿಸಲು ಮುಂದಾಗಿದ್ದ ಅವರು ಗಾಂಜಾ ಮಾರಾಟ ಮಾಡಲಾರಂಭಿಸಿದ್ದ. ಬೀದರ್ನಲ್ಲಿ ಖರೀದಿಸುತ್ತಿದ್ದ ಗಾಂಜಾವನ್ನು ಕಾರಿನಲ್ಲಿ ನಗರಕ್ಕೆ ತಂದು ಪರಿಚಯಸ್ಥ ಗ್ರಾಹಕರಿಗೆ ಮಾರುತ್ತಿದ್ದರು’ ಎಂದೂ ಹೇಳಿದರು.</p>.<p>‘ಕಿರಣ್ ಹಾಗೂ ಮಹಿಪಾಲ್ ಇಬ್ಬರೂ ಸಂಬಂಧಿಕರು. ಕೆಲ ತಿಂಗಳ ಹಿಂದಷ್ಟೇ ಅವರಿಗೆ ಅಸ್ಗರ್ ಖಾನ್ ಪರಿಚಯ ಆಗಿತ್ತು. ನಂತರ ಮೂವರು ಸೇರಿಕೊಂಡು ಬಾಡಿಗೆ ಕಾರು ಪಡೆದು ಬೀದರ್ಗೆ ಹೋಗಿ ಗಾಂಜಾ ತರುತ್ತಿದ್ದರು. ಮಾರ್ಗಮಧ್ಯೆ ಉಪ ಪೆಡ್ಲರ್ಗಳಿಗೆ ಗಾಂಜಾ ಮಾರುತ್ತಿದ್ದರು’ ಎಂದೂ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>