‘ಬೈಯಪ್ಪನಹಳ್ಳಿಯ ಸರ್ವೆ ನಂ.80ಕ್ಕೆ ಸೇರಿದ ಜಾಗದಲ್ಲಿ ನಗರದ ಬಿಬಿಎಂಪಿ ವ್ಯಾಪ್ತಿಯ ಕಸತಂದು ವಿಲೇವಾರಿ ಮಾಡುತ್ತಿರುವುದರ ಜೊತೆಗೆ ಈ ಜಾಗದಲ್ಲಿ ಕಸ ವಿಲೇವಾರಿ ಘಟಕ ಸ್ಥಾಪನೆ ಮಾಡಲು ಬಿಬಿಎಂಪಿ ಮುಂದಾಗಿದೆ. ಇದರಿಂದ ಬೈಯಪ್ಪನಹಳ್ಳಿ, ಶ್ರೀನಿವಾಸಪುರ, ಮಿಟ್ಟಿಗಾನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನಿವಾಸಿಗಳು, ದುರ್ವಾಸನೆ ಮತ್ತು ಅಪಾಯಕಾರಿ ಹೊಗೆಯ ಸಮಸ್ಯೆ ಎದುರಿಸಬೇಕಾಗಿದೆ’ ಎಂದು ಮುತ್ತುರಾಜ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.