<p><strong>ಬೆಂಗಳೂರು: </strong>ಎಚ್ಎಸ್ಆರ್ ಲೇಔಟ್ನಲ್ಲಿ ಅಳವಡಿಸಿರುವ ಗ್ಯಾಸ್ ಪೈಪ್ ಒಡೆದು ಅನಿಲ ಸೋರಿಕೆಯಾಗಿದ್ದರಿಂದ, ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.</p>.<p>ಒಂದನೇ ಹಂತದ 11ನೇ ಮುಖ್ಯರಸ್ತೆಯ 22ನೇ ಅಡ್ಡರಸ್ತೆಯ ನೆಲದಡಿ ‘ಗೇಲ್’ ಕಂಪನಿಯಿಂದ ಗ್ಯಾಸ್ ಪೈಪ್ಲೈನ್ ಅಳವಡಿಸಲಾಗಿದೆ. ಅದೇ ಜಾಗದಲ್ಲಿಕಾರ್ಮಿಕರು, ಶನಿವಾರ ಯಂತ್ರ ಮೂಲಕ ಏರ್ಟೆಲ್ ಮೊಬೈಲ್ ಕಂಪನಿಯ ಕೇಬಲ್ ಅಳವಡಿಸುತ್ತಿದ್ದರು.</p>.<p>‘ರಾತ್ರಿ 7.30ರ ಸುಮಾರಿಗೆ ನೆಲದಡಿಯಲ್ಲಿದ್ದ ಗ್ಯಾಸ್ನ ಪೈಪ್ಗೆ ಹಾನಿಯಾಗಿತ್ತು. ನಂತರ, ಗ್ಯಾಸ್ ಸೋರಿಕೆಯಾಗಿ ವಾಸನೆ ಬರಲಾರಂಭಿಸಿತ್ತು. ಗಾಬರಿಗೊಂಡ ಜನ, ಮನೆಯಿಂದ ಹೊರಗೆ ಬಂದು ನಿಂತುಕೊಂಡರು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು.</p>.<p>‘ಸ್ಥಳದಲ್ಲಿ ಗ್ಯಾಸ್ ಮಾತ್ರ ಸೋರಿಕೆಯಾಗುತ್ತಿತ್ತು. ಬೆಂಕಿ ಹೊತ್ತಿಕೊಂಡಿರಲಿಲ್ಲ. ಅಗ್ನಿಶಾಮಕ ದಳದ ಸರ್ಜಾಪುರ ಠಾಣೆಯ ಸಿಬ್ಬಂದಿ, ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು. ಗೇಲ್ ಕಂಪನಿ ಸಿಬ್ಬಂದಿ, ಸೋರಿಕೆಯಾಗುತ್ತಿದ್ದ ಪೈಪ್ ಬದಲಾಯಿಸಿ ಹೊಸ ಪೈಪ್ ಅಳವಡಿಸಿದರು’ ಎಂದರು.</p>.<p class="Subhead">ಪೊಲೀಸರಿಗೆ ದೂರು: ‘ಗ್ಯಾಸ್ ಪೈಪ್ಲೈನ್ ಇರುವ ಜಾಗದಲ್ಲಿ ‘ಪೈಪ್ಲೈನ್ ಇದೆ. ಎಚ್ಚರಿಕೆ’ ಎಂಬ ಫಲಕ ಹಾಕಲಾಗಿದೆ. ಏರ್ಟೆಲ್ ಕಂಪನಿಯವರು ಅನುಮತಿ ಪಡೆಯದೇ ಕೇಬಲ್ ಅಳವಡಿಸುವುದಕ್ಕಾಗಿ ರಸ್ತೆ ಅಗೆಯುತ್ತಿದ್ದರು. ಅವರ ನಿರ್ಲಕ್ಷ್ಯದಿಂದ ಪೈಪ್ ಒಡೆದಿರುವುದಾಗಿ ಗೇಲ್ ಅಧಿಕಾರಿಗಳು ಆರೋಪಿಸುತ್ತಿದ್ದಾರೆ’ ಎಂದು ಎಚ್ಎಸ್ಆರ್ ಲೇಔಟ್ ಪೊಲೀಸರು ಹೇಳಿದರು.</p>.<p>‘ಗೇಲ್ ಅಧಿಕಾರಿಗಳಿಂದ ದೂರು ಪಡೆಯಲಾಗಿದೆ. ಏರ್ಟೆಲ್ ಕಂಪನಿ ಪ್ರತಿನಿಧಿ ಹಾಗೂ ಕಾರ್ಮಿಕರನ್ನು ವಿಚಾರಣೆ ನಡೆಸಲಿದ್ದೇವೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಎಚ್ಎಸ್ಆರ್ ಲೇಔಟ್ನಲ್ಲಿ ಅಳವಡಿಸಿರುವ ಗ್ಯಾಸ್ ಪೈಪ್ ಒಡೆದು ಅನಿಲ ಸೋರಿಕೆಯಾಗಿದ್ದರಿಂದ, ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.</p>.<p>ಒಂದನೇ ಹಂತದ 11ನೇ ಮುಖ್ಯರಸ್ತೆಯ 22ನೇ ಅಡ್ಡರಸ್ತೆಯ ನೆಲದಡಿ ‘ಗೇಲ್’ ಕಂಪನಿಯಿಂದ ಗ್ಯಾಸ್ ಪೈಪ್ಲೈನ್ ಅಳವಡಿಸಲಾಗಿದೆ. ಅದೇ ಜಾಗದಲ್ಲಿಕಾರ್ಮಿಕರು, ಶನಿವಾರ ಯಂತ್ರ ಮೂಲಕ ಏರ್ಟೆಲ್ ಮೊಬೈಲ್ ಕಂಪನಿಯ ಕೇಬಲ್ ಅಳವಡಿಸುತ್ತಿದ್ದರು.</p>.<p>‘ರಾತ್ರಿ 7.30ರ ಸುಮಾರಿಗೆ ನೆಲದಡಿಯಲ್ಲಿದ್ದ ಗ್ಯಾಸ್ನ ಪೈಪ್ಗೆ ಹಾನಿಯಾಗಿತ್ತು. ನಂತರ, ಗ್ಯಾಸ್ ಸೋರಿಕೆಯಾಗಿ ವಾಸನೆ ಬರಲಾರಂಭಿಸಿತ್ತು. ಗಾಬರಿಗೊಂಡ ಜನ, ಮನೆಯಿಂದ ಹೊರಗೆ ಬಂದು ನಿಂತುಕೊಂಡರು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು.</p>.<p>‘ಸ್ಥಳದಲ್ಲಿ ಗ್ಯಾಸ್ ಮಾತ್ರ ಸೋರಿಕೆಯಾಗುತ್ತಿತ್ತು. ಬೆಂಕಿ ಹೊತ್ತಿಕೊಂಡಿರಲಿಲ್ಲ. ಅಗ್ನಿಶಾಮಕ ದಳದ ಸರ್ಜಾಪುರ ಠಾಣೆಯ ಸಿಬ್ಬಂದಿ, ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು. ಗೇಲ್ ಕಂಪನಿ ಸಿಬ್ಬಂದಿ, ಸೋರಿಕೆಯಾಗುತ್ತಿದ್ದ ಪೈಪ್ ಬದಲಾಯಿಸಿ ಹೊಸ ಪೈಪ್ ಅಳವಡಿಸಿದರು’ ಎಂದರು.</p>.<p class="Subhead">ಪೊಲೀಸರಿಗೆ ದೂರು: ‘ಗ್ಯಾಸ್ ಪೈಪ್ಲೈನ್ ಇರುವ ಜಾಗದಲ್ಲಿ ‘ಪೈಪ್ಲೈನ್ ಇದೆ. ಎಚ್ಚರಿಕೆ’ ಎಂಬ ಫಲಕ ಹಾಕಲಾಗಿದೆ. ಏರ್ಟೆಲ್ ಕಂಪನಿಯವರು ಅನುಮತಿ ಪಡೆಯದೇ ಕೇಬಲ್ ಅಳವಡಿಸುವುದಕ್ಕಾಗಿ ರಸ್ತೆ ಅಗೆಯುತ್ತಿದ್ದರು. ಅವರ ನಿರ್ಲಕ್ಷ್ಯದಿಂದ ಪೈಪ್ ಒಡೆದಿರುವುದಾಗಿ ಗೇಲ್ ಅಧಿಕಾರಿಗಳು ಆರೋಪಿಸುತ್ತಿದ್ದಾರೆ’ ಎಂದು ಎಚ್ಎಸ್ಆರ್ ಲೇಔಟ್ ಪೊಲೀಸರು ಹೇಳಿದರು.</p>.<p>‘ಗೇಲ್ ಅಧಿಕಾರಿಗಳಿಂದ ದೂರು ಪಡೆಯಲಾಗಿದೆ. ಏರ್ಟೆಲ್ ಕಂಪನಿ ಪ್ರತಿನಿಧಿ ಹಾಗೂ ಕಾರ್ಮಿಕರನ್ನು ವಿಚಾರಣೆ ನಡೆಸಲಿದ್ದೇವೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>