‘ಬೆಂಗಳೂರು ಗಾಯನ ಸಮಾಜದ ಹಣಕಾಸು ವ್ಯವಹಾರದಲ್ಲಿ ಪಾರದರ್ಶಕತೆ ಇಲ್ಲ, ಕಲಾವಿದರ ಆಯ್ಕೆ, ಸಂಭಾವನೆ ನೀಡುವಲ್ಲಿ ತಾರತಮ್ಯ ಎಸಗಲಾಗುತ್ತಿದೆ ಮತ್ತು ಸಂಸ್ಥೆಗೆ ದಾನಿಗಳು ನೀಡಿದ ಗ್ರಂಥಗಳು ಹಾಗೂ ಸಂಗೀತ ವಾದ್ಯ, ಸಲಕರಣೆಗಳನ್ನು ಸಂಘದ ಅಧ್ಯಕ್ಷರು ಮತ್ತು ಅನುಯಾಯಿಗಳು ಸ್ವಂತಕ್ಕೆ ಬಳಸಿಕೊಂಡಿದ್ದಾರೆ’ ಎಂಬುದೂ ಸೇರಿದಂತೆ 12ಕ್ಕೂ ಹೆಚ್ಚು ಗುರುತರ ಅರೋಪ ಮಾಡಲಾಗಿದೆ.