<p><strong>ಬೆಂಗಳೂರು:</strong> ನಾಯಂಡಹಳ್ಳಿ– ಕೆಎಸ್ಆರ್ ರೈಲು ನಿಲ್ದಾಣದ ನಡುವಿನ ಮಾರ್ಗದಲ್ಲಿ ಸರಕು ಸಾಗಣೆ ರೈಲು ಹಳಿ ತಪ್ಪಿ ಕೆಲ ಕಾಲ ರೈಲು ಸಂಚಾರಕ್ಕೆ ತೊಡಕಾಗಿತ್ತು.</p>.<p>ರೈಲಿನ ನಾಲ್ಕು ಚಕ್ರಗಳು ಮಧ್ಯಾಹ್ನ 3.10ರ ವೇಳೆಗೆ ಹಳಿ ತಪ್ಪಿದ್ದವು. ಕೂಡಲೇ ಸರಿಪಡಿಸುವ ಕಾರ್ಯವನ್ನು ರೈಲು ಸಿಬ್ಬಂದಿ ಆರಂಭಿಸಿದರು. ಸಂಜೆ 5.34ರ ವೇಳೆಗೆ ಸರಿಪಡಿಸಲಾಯಿತು.</p>.<p>ರೈಲ್ವೆ ಮಾರ್ಗಕ್ಕಾಗಲಿ, ರೈಲಿನಲ್ಲಿ ಇದ್ದ ಸಿಬ್ಬಂದಿಗಾಗಲಿ ಯಾವುದೇ ತೊಂದರೆ ಆಗಿಲ್ಲ. ರೈಲು ಹಳಿ ತಪ್ಪಲು ಕಾರಣ ಏನು ಎಂಬುದನ್ನು ಪತ್ತೆ ಹಚ್ಚಲು ತನಿಖೆ ಆರಂಭಿಸಲಾಗಿದೆ ಎಂದು ನೈರುತ್ಯ ರೈಲ್ವೆ ಸ್ಪಷ್ಟಪಡಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ನಾಯಂಡಹಳ್ಳಿ– ಕೆಎಸ್ಆರ್ ರೈಲು ನಿಲ್ದಾಣದ ನಡುವಿನ ಮಾರ್ಗದಲ್ಲಿ ಸರಕು ಸಾಗಣೆ ರೈಲು ಹಳಿ ತಪ್ಪಿ ಕೆಲ ಕಾಲ ರೈಲು ಸಂಚಾರಕ್ಕೆ ತೊಡಕಾಗಿತ್ತು.</p>.<p>ರೈಲಿನ ನಾಲ್ಕು ಚಕ್ರಗಳು ಮಧ್ಯಾಹ್ನ 3.10ರ ವೇಳೆಗೆ ಹಳಿ ತಪ್ಪಿದ್ದವು. ಕೂಡಲೇ ಸರಿಪಡಿಸುವ ಕಾರ್ಯವನ್ನು ರೈಲು ಸಿಬ್ಬಂದಿ ಆರಂಭಿಸಿದರು. ಸಂಜೆ 5.34ರ ವೇಳೆಗೆ ಸರಿಪಡಿಸಲಾಯಿತು.</p>.<p>ರೈಲ್ವೆ ಮಾರ್ಗಕ್ಕಾಗಲಿ, ರೈಲಿನಲ್ಲಿ ಇದ್ದ ಸಿಬ್ಬಂದಿಗಾಗಲಿ ಯಾವುದೇ ತೊಂದರೆ ಆಗಿಲ್ಲ. ರೈಲು ಹಳಿ ತಪ್ಪಲು ಕಾರಣ ಏನು ಎಂಬುದನ್ನು ಪತ್ತೆ ಹಚ್ಚಲು ತನಿಖೆ ಆರಂಭಿಸಲಾಗಿದೆ ಎಂದು ನೈರುತ್ಯ ರೈಲ್ವೆ ಸ್ಪಷ್ಟಪಡಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>