ಬೆಂಗಳೂರು: ಗೂಗಲ್ ಕಂಪನಿಯು ನಗರದ ಸಂಚಾರ ಪೊಲೀಸರ ಸಹಕಾರದಲ್ಲಿ ಕತ್ರಿಗುಪ್ಪೆ ವೃತ್ತದಲ್ಲಿ ವಾಹನ ದಟ್ಟಣೆ ಅಧ್ಯಯನ ಮಾಡಿ, ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಸಿಗ್ನಲ್ಲೈಟ್ನಲ್ಲಿ ಹಸಿರು, ಕೆಂಪು ದೀಪಗಳು ಹೊತ್ತುವ ಸಮಯ ನಿಗದಿಪಡಿಸಲು ಕತ್ರಿಗುಪ್ಪೆ ವೃತ್ತದಲ್ಲಿ ಪ್ರಾಯೋಗಿಕ ಯೋಜನೆ ಅನುಷ್ಠಾನಕ್ಕೆ ತಂದಿತ್ತು. ಅದು ಯಶಸ್ವಿಯಾಗಿದ್ದು, ಇತರೆ ವೃತ್ತಗಳಲ್ಲೂ ಈ ಯೋಜನೆ ಜಾರಿಗೊಳಿಸಲು ನಗರ ಪೊಲೀಸರು ಮುಂದಾಗಿದ್ದಾರೆ.