’ನಿಗದಿತ ಸ್ಥಳ ಬರುತ್ತಿದ್ದಂತೆ ಚಾಲಕ, ಪ್ರಯಾಣ ದರ ಕೇಳಿದ್ದ. ಕೈಯಲ್ಲಿ ಹಣವಿಲ್ಲದಿದ್ದರಿಂದ ಎಟಿಎಂ ಘಟಕದಿಂದ ತೆಗೆಸಿಕೊಂಡು ಬರುವುದಾಗಿ ಹೇಳಿ ಸ್ನೇಹಿತ ಹೊರಟು ಹೋಗಿದ್ದ. ಸತೀಶ್ ಮಾತ್ರ ಸ್ಥಳದಲ್ಲೇ ನಿಂತಿದ್ದ. ಅದೇ ವೇಳೆ ಆರೋಪಿಗಳು, ಸತೀಶ್ ಅವರನ್ನು ಟೆಂಪೊದಲ್ಲಿ ಅಪಹರಿಸಿಕೊಂಡು ಹೋಗಿದ್ದರು. ಎಟಿಎಂ ಕಾರ್ಡ್ ಕಸಿದುಕೊಂಡು ₹4,400 ಡ್ರಾ ಮಾಡಿಕೊಂಡಿದ್ದರು.’