ಬೆಂಗಳೂರು: ‘ಸಕಲವನ್ನೂ ನೀಡುವ ಗೋವನ್ನು ಸಂರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರದು. ಅದರಲ್ಲೂ ಕೃಷಿ ಪ್ರಧಾನ ದೇಶ ಆಗಿರುವುದರಿಂದ ಗೋವಿನ ತಳಿಗಳನ್ನು ಉಳಿಸಿ ಬೆಳೆಸುವ ಕೆಲಸ ಆಗಬೇಕಿದೆ’ ಎಂದು ಬಿಜೆಪಿ ಯುವ ಮುಖಂಡ ಡಾ. ಅರಣ್ ಸೋಮಣ್ಣ ಹೇಳಿದರು.
ವಸತಿ ಸಚಿವ ವಿ.ಸೋಮಣ್ಣ ಅವರ ಶಾಸಕರ ಕಚೇರಿಯಲ್ಲಿ ಶನಿವಾರ ಗೋವಿನ ಪೂಜೆ ಸಲ್ಲಿಸಿ ಅವರು ಮಾತನಾಡಿದರು. ಬಿಬಿಎಂಪಿ ಮಾಜಿ ಸದಸ್ಯ ಮೋಹನ್ ಕುಮಾರ್, ರೂಪ ಲಿಂಗೇಶ್, ರಾಮಪ್ಪ, ರಾಜೇಶ್ವರಿ ಬೆಳಗೋಡು ಇದ್ದರು.