ರಾಜರಾಜೇಶ್ವರಿನಗರ: ‘ಕಾಟಾಚಾರಕ್ಕೆ ಗ್ರಾಮಸಭೆ ನಡೆಸಿ ಕೈತೊಳೆದುಕೊಳ್ಳುವ ಪ್ರವೃತ್ತಿ ಏಕೆ. ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ 28 ಇಲಾಖೆಗಳು ಬರುತ್ತಿದ್ದು, ಈ ಪೈಕಿ 11 ಇಲಾಖೆಯ ಸಹಾಯಕರು ಮಾತ್ರ ಸಭೆಗೆ ಹಾಜರಾಗಿ ಹಾರಿಕೆಯ ಉತ್ತರ ನೀಡಿದ್ದಾರೆ’ ಎಂದು ವಿಧಾನ ಪರಿಷತ್ ಸದಸ್ಯ ಎಂ.ನಾರಾಯಣಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.