‘ಕಟ್ಟಡ ಅವಶೇಷ, ಕೋಳಿ ಅಂಗಡಿ ತ್ಯಾಜ್ಯವನ್ನು ವಾಹನಗಳಲ್ಲಿ ತಂದು ಸುರಿಯಲಾಗುತ್ತದೆ. ಅದರ ಜತೆಗೆ ಗ್ರಾನೈಟ್ ಕಾರ್ಖಾನೆಗಳಲ್ಲಿ ಕಲ್ಲು ಕತ್ತರಿಸಲು ಬಳಸುವ ರಾಸಾಯನಿಕ ಮಿಶ್ರಿತ ನೀರನ್ನು ಸಂಗ್ರಹಿಸಿ ಟ್ಯಾಂಕರ್ಗಳಲ್ಲಿ ತುಂಬಿಕೊಂಡು ತಂದು ಈ ಗುಂಡಿಗಳಿಗೆ ಸುರಿಯಲಾಗುತ್ತಿದೆ. ಇದು ಸೇರಿಕೊಂಡು ಇಲ್ಲಿನ ನೀರು ಕಲುಷಿತಗೊಂಡಿದೆ. ಇದೇ ನೀರನ್ನು ಕುಡಿದು ಮೇಕೆಗಳು ಮೃತಪಟ್ಟಿವೆ’ ಎಂದು ಸ್ಥಳೀಯರಾದ ದಿನೇಶ್ ಹೇಳಿದರು.