<p>ಬೆಂಗಳೂರು: ಎಚ್ಎಎಲ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಐಟಿಐ ವಿದ್ಯಾರ್ಥಿ ಲಿಖಿತ್ (19) ಎಂಬುವರ ಕೊಲೆ ಪ್ರಕರಣ ಸಂಬಂಧ ಮೂವರು ಸಹೋದರರನ್ನು ಪೊಲೀಸರು ಬಂಧಿಸಿದ್ದಾರೆ.</p>.<p>‘ವಿಭೂತಿಪುರದ ಮೊಹಮ್ಮದ್ ನಯೀಮ್ (27), ಆತನ ಅಣ್ಣಂದಿರಾದ ಮೊಹಮ್ಮದ್ ಮೋಹಿನ್, ವಾಸೀಂ ಬಂಧಿತರು. ಲಿಖಿತ್ ಅವರನ್ನು ಡ್ರ್ಯಾಗರ್ನಿಂದ ಇರಿದು ಕೊಂದು ಆರೋಪಿಗಳು ಪರಾರಿಯಾಗಿದ್ದರು. ಕೃತ್ಯ ನಡೆದು 8 ಗಂಟೆಯಲ್ಲೇ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.</p>.<p>‘ದೊಮ್ಮಲೂರಿನ ಲಿಖಿತ್, ಐಟಿಐ ವ್ಯಾಸಂಗ ಮಾಡುತ್ತಿದ್ದರು. ಪರಿಚಯಿಸ್ಥ ಸಿದ್ಧಿಕ್ ಎಂಬುವರ ಬಳಿ ಹಣಕಾಸಿನ ವ್ಯವಹಾರ ಇಟ್ಟುಕೊಂಡಿದ್ದರು. ಇದೇ ವಿಚಾರವಾಗಿ ಇಬ್ಬರ ನಡುವೆ ಮನಃಸ್ತಾಪ ಉಂಟಾಗಿತ್ತು. ಜಗಳವೂ ನಡೆದಿತ್ತು. ಸಿದ್ಧಿಕ್ ಸ್ನೇಹಿತನಾಗಿದ್ದ ಆರೋಪಿ ನಯೀಮ್ ಮಧ್ಯಪ್ರವೇಶಿಸಿದ್ದ.’</p>.<p>‘ಸಂಧಾನ ಮಾಡುವುದಾಗಿ ಹೇಳಿದ್ದ ನಯೀಮ್, ಲಿಖಿತ್ ಅವರನ್ನು ಲಾಲ್ ಬಹದ್ದೂರ್ ಶಾಸ್ತ್ರಿ ನಗರಕ್ಕೆ ಶುಕ್ರವಾರ ಸಂಜೆ ಕರೆಸಿಕೊಂಡಿದ್ದ. ಅಣ್ಣಂದಿರ ಜೊತೆ ಹಾಜರಾಗಿದ್ದ ನಯೀಮ್, ಲಿಖಿತ್ ಜೊತೆ ಜಗಳ ತೆಗೆದಿದ್ದ. ಪರಸ್ಪರ ಕೈ ಕೈ ಮಿಲಾಯಿಸಿ ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು.’</p>.<p>‘ಲಿಖಿತ್ ಅವರನ್ನು ತಳ್ಳಾಡಿದ್ದ ಆರೋಪಿಗಳು, ದೇಹದ ಹಲವೆಡೆ ಡ್ರ್ಯಾಗರ್ನಿಂದ ಇರಿದಿದ್ದರು. ತೀವ್ರ ರಕ್ತಸ್ರಾವದಿಂದಾಗಿ ಲಿಖಿತ್ ಸ್ಥಳದಲ್ಲೇ ಮೃತಪಟ್ಟಿದ್ದರು’ ಎಂದೂ ಪೊಲೀಸರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ಎಚ್ಎಎಲ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಐಟಿಐ ವಿದ್ಯಾರ್ಥಿ ಲಿಖಿತ್ (19) ಎಂಬುವರ ಕೊಲೆ ಪ್ರಕರಣ ಸಂಬಂಧ ಮೂವರು ಸಹೋದರರನ್ನು ಪೊಲೀಸರು ಬಂಧಿಸಿದ್ದಾರೆ.</p>.<p>‘ವಿಭೂತಿಪುರದ ಮೊಹಮ್ಮದ್ ನಯೀಮ್ (27), ಆತನ ಅಣ್ಣಂದಿರಾದ ಮೊಹಮ್ಮದ್ ಮೋಹಿನ್, ವಾಸೀಂ ಬಂಧಿತರು. ಲಿಖಿತ್ ಅವರನ್ನು ಡ್ರ್ಯಾಗರ್ನಿಂದ ಇರಿದು ಕೊಂದು ಆರೋಪಿಗಳು ಪರಾರಿಯಾಗಿದ್ದರು. ಕೃತ್ಯ ನಡೆದು 8 ಗಂಟೆಯಲ್ಲೇ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.</p>.<p>‘ದೊಮ್ಮಲೂರಿನ ಲಿಖಿತ್, ಐಟಿಐ ವ್ಯಾಸಂಗ ಮಾಡುತ್ತಿದ್ದರು. ಪರಿಚಯಿಸ್ಥ ಸಿದ್ಧಿಕ್ ಎಂಬುವರ ಬಳಿ ಹಣಕಾಸಿನ ವ್ಯವಹಾರ ಇಟ್ಟುಕೊಂಡಿದ್ದರು. ಇದೇ ವಿಚಾರವಾಗಿ ಇಬ್ಬರ ನಡುವೆ ಮನಃಸ್ತಾಪ ಉಂಟಾಗಿತ್ತು. ಜಗಳವೂ ನಡೆದಿತ್ತು. ಸಿದ್ಧಿಕ್ ಸ್ನೇಹಿತನಾಗಿದ್ದ ಆರೋಪಿ ನಯೀಮ್ ಮಧ್ಯಪ್ರವೇಶಿಸಿದ್ದ.’</p>.<p>‘ಸಂಧಾನ ಮಾಡುವುದಾಗಿ ಹೇಳಿದ್ದ ನಯೀಮ್, ಲಿಖಿತ್ ಅವರನ್ನು ಲಾಲ್ ಬಹದ್ದೂರ್ ಶಾಸ್ತ್ರಿ ನಗರಕ್ಕೆ ಶುಕ್ರವಾರ ಸಂಜೆ ಕರೆಸಿಕೊಂಡಿದ್ದ. ಅಣ್ಣಂದಿರ ಜೊತೆ ಹಾಜರಾಗಿದ್ದ ನಯೀಮ್, ಲಿಖಿತ್ ಜೊತೆ ಜಗಳ ತೆಗೆದಿದ್ದ. ಪರಸ್ಪರ ಕೈ ಕೈ ಮಿಲಾಯಿಸಿ ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು.’</p>.<p>‘ಲಿಖಿತ್ ಅವರನ್ನು ತಳ್ಳಾಡಿದ್ದ ಆರೋಪಿಗಳು, ದೇಹದ ಹಲವೆಡೆ ಡ್ರ್ಯಾಗರ್ನಿಂದ ಇರಿದಿದ್ದರು. ತೀವ್ರ ರಕ್ತಸ್ರಾವದಿಂದಾಗಿ ಲಿಖಿತ್ ಸ್ಥಳದಲ್ಲೇ ಮೃತಪಟ್ಟಿದ್ದರು’ ಎಂದೂ ಪೊಲೀಸರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>